ಪ್ಲಾಸಿ ಕದನದ ಬಗ್ಗೆ ಮಾಹಿತಿ Information about the Battle of Plassey Plassey Kadanada bagge Mahithi in Kannada
ಪ್ಲಾಸಿ ಕದನದ ಬಗ್ಗೆ ಮಾಹಿತಿ
![Information about the Battle of Plassey in Kannada](https://i0.wp.com/kannadanotes.com/wp-content/uploads/2023/03/ಪ್ಲಾಸಿ-ಕದನದ-ಬಗ್ಗೆ-ಮಾಹಿತಿ.jpg?resize=351%2C233&ssl=1)
ಈ ಲೇಖನಿಯಲ್ಲಿ ಪ್ಲಾಸಿ ಕದನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಪ್ಲಾಸಿ ಕದನಕ್ಕೆ ಕಾರಣಗಳು :
ರಾಜಕೀಯ ಕಾರಣಗಳು :
- ಆಲಿವರ್ಧಿಖಾನನ 2ನೇ ಮಗಳ ಮಗ ಮತ್ತು ಪೂರ್ನಿಯಾದ ಸುಬೇದಾರನಾಗಿದ್ದ ಶೌಕತ್ ಸಿಂಗ್, ಮೊದಲ ಮಗಳಾದ ಢಾಕಾದ ಘಸ್ತಿ ಬೇಗಂ, ಘಸ್ತಿ ಬೇಗಳಂ ದಿವಾನನಾಗಿದ್ದ ರಾಜವಲ್ಲಬ್, ರಾಜವಲ್ಲಬನ ಮಗ ಕಿಶನದಾಸ್ /ಕೃಷ್ಣ ವಲ್ಲಬ್ ಈ ಎಲ್ಲಾ ಸದಸ್ಯರು ನವಾಬ ವಿರುದ್ದ ದಂಗೆ ಮತ್ತು ಪಿತೂರಿ ನಡೆಸಿದರು.
- ಈ ಎಲ್ಲಾ ಸದ್ಯಸರಿಗೂ ಬ್ರಿಟೀಷರು ಆಶ್ರಯ ನೀಡಿ ಬೆಂಬಲಿಸಿದರು.
ದಸ್ತಕಗಳ ದುರುಪಯೋಗ :
- 1711ರಲ್ಲಿ ಮೊಗಲ್ ದೊರೆ ಫರೂಕ್ಸಿಯಾರ್ ಇಂಗ್ಲೀಷರಿಗೆ ಬಂಗಾಳದಲ್ಲಿ ತೆರಿಗೆ ರಹಿತ ವ್ಯಾಪಾರಕ್ಕಾಗಿ ಅನುಮತಿ ನೀಡಿದ್ದನು.
- ದಸ್ತಕಗಳನ್ನು ಬಂಗಾಳದ ಸರ್ಕಾರ “ಈಸ್ಟ್ ಇಂಡಿಯಾ ಕಂಪನಿ” ಗೆ ನೀಡಿತ್ತು ಮತ್ತು ಅವು ವ್ಯಾಪಾರದಲ್ಲಿ ಸುಂಕ ವಿನಾಯಿತಿಯನ್ನು ಒದಗಿಸಿದವು.
- ದಸ್ತಕಗಳನ್ನು ಸುಂಕರಹಿತ ವ್ಯಾಪಾರಕ್ಕೆ ಬಳಸಿದ್ದು ಮತ್ತು ದಸ್ತಕಗಳನ್ನು ಭಾರತೀಯ ವರ್ತಕರಿಗೆ ಮಾರಿ ಲಾಭಗಳಿಸಿದ್ದು.
- ದಸ್ತಕಗಳನ್ನು ಈಸ್ಟ್ ಇಂಡಿಯಾ ಕಂಪನಿಯ ನೌಕರರು ತಮ್ಮ ಖಾಸಗಿ ವ್ಯಾಪಾರಕ್ಕಾಗಿ ದುರುಪಯೋಗ ಪಡಿಸಿಕೊಂಡು ಮತ್ತು ಲಾಭಕ್ಕಾಗಿ ಸ್ಥಳೀಯ ವ್ಯಾಪಾರಗಳಿಗೆ ಮಾರಿದರು. ಇದರಿಂದಾಗಿ ರಾಜ್ಯದ ಆದಾಯಕ್ಕೆ ನಷ್ಟವಾಯಿತು.
- ದಸ್ತಕಗಳನ್ನು ಕೊಂಡು ಮೋಸ ಮಾಡಿದ ಭಾರತೀಯ ವರ್ತಕರಿಗೆ ನವಾಬನು ಶಿಕ್ಚಿಸಲು ಮುಂದಾದಾಗ ಬ್ರಿಟೀಷರು ಆಶ್ರಯ ಕೊಟ್ಟಿದ್ದು.
ಫ್ರೆಂಚರಿಗೆ ನೆರವು :
- ಬ್ರಿಟೀಷರು ಮತ್ತು ಫ್ರೆಂಚರು ವೈರಿಗಳಾಗಿದ್ದರು. 1756ರಲ್ಲಿ ಫ್ರೆಂಚರ ವ್ಯಾಪಾರಿ ಕೇಂದ್ರವಾದ ಚಂದ್ರನಾಗೂರನ್ನು ಗೆದ್ದು ಅಲ್ಲಿಂದ ಫ್ರೆಂಚರನ್ನು ಹೊರಹಾಕಿದರು. ಆಗ ಬಂಗಾಳದ ನವಾಬ ಸಿರಾಜ್ ಉದ್ ದೌಲನು ಕೆಲವು ಫ್ರೆಂಚರಿಗೆ ಆಶ್ರಯ ನೀಡಿದ್ದು, ಬ್ರಿಟೀಷರು ಕೆರಳಿಸಿತು.
- ಆಗ ರಾಬರ್ಟ್ ಕ್ಲೈವ್ ನು ಆಡ್ಮಿರಲ್ ವ್ಯಾಟ್ಸನ್ ಕಲ್ಕತ್ತವನ್ನು 1757 ಜನವರಿ 2 ರಂದು ಮರು ವಶಪಡಿಸಿಕೊಂಡನು.
- ರಾಬರ್ಟ್ ಕ್ಲೈವ್ ಮತ್ತು ಸಿರಾಜ್ ಉದ್ದೌಲನ ನಡುವೆ ಫೆಬ್ರವರಿ 9, 1757ರಂದು ಆಲಿನಗರ ಒಪ್ಪಂದವಾಯಿತು.
ಆಲಿನಗರ ಒಪ್ಪಂದದ ಕರಾರುಗಳು :
- ಸಿರಾಜ್ ಉದ್ ದೌಲನು ಅವರದೇ ಆದ ನಾಣ್ಯಗಳನ್ನು ಠಂಕಿಸಲು ಇಂಗ್ಲೀಷರಿಗೆ ಅನುಮತಿ ನೀಡುವುದು.
- ಇಂಗ್ಲೀಷರಿಗೆ ಯುದ್ದ ಪರಿಹಾರವನ್ನು ಒದಗಿಸುವುದು.
- ಕಲ್ಕತ್ತಾದಲ್ಲಿ ಬ್ರಿಟೀಷರಿಗೆ ಕೋಟೆ ಕಟ್ಟಲು ನವಾಬ ಅನುಮತಿ ನೀಡಬೇಕು.
ಕಲ್ಕತ್ತಾ ಕೋಟೆಯ ಆಕ್ರಮಣ :
- ಫ್ರೆಂಚರಿಗೆ ಹೆದರಿದ ಇಂಗ್ಲೀಷರು ನವಾಬನ ಅನುಮತಿ ಇಲ್ಲದೇ ಕಲ್ಕತ್ತಾ ಕೋಟೆಯನ್ನು ಭದ್ರಪಡಿಸಿಕೊಂಡರು. ಸಿರಾಜ್ ಉದ್ ದೌಲನು ಅದನ್ನು ಕೆಡವಲು ಆದೇಶಿಸಿದರು.
- ಇದರಿಂದಾಗಿ ಸಿರಾಜ್ ಉದ್ ದೌಲ ಜೂನ್ 1756ರಲ್ಲಿ ಕಲ್ಕತ್ತಾ ಕೋಟೆಯನ್ನು ವಶಕ್ಕೆ ಪಡೆದುಕೊಂಡರು. ಆದರೆ ರಾಬರ್ಟ್ ಕ್ಲೈವ್ ಇದನ್ನು ಪುನಃ ವಶಪಡಿಸಿಕೊಂಡಾಗ ನವಾಬ ಯುದ್ದಕ್ಕೆ ಸಿದ್ದನಾದನು.
ಬ್ರಿಟೀಷರಿಂದ ದಿವಾನ ರಾಜವಲ್ಲಭನಿಗೆ ಆಶ್ರಯ :
- ದಿವಾನ ರಾಜವಲ್ಲಭನು ಸಿರಾಜ್ ಉದ್ದೌಲನ ಕಛೇರಿಯ ಲೆಕ್ಕಪತ್ರಗಳನ್ನು ಒಪ್ಪಿಸದಿದ್ದಾಗ ನವಾಬನು ಒತ್ತಾಯಿಸಿದನು. ಅವುಗಳನ್ನು ಕೊಡದೆ ದಿವಾನ ಬ್ರಿಟೀಷರ ಆಶ್ರಯ ಪಡೆದನು. ಇದು ಸಿರಾಜನನ್ನು ಕೆರಳಿಸಿತು.
- ಸಿರಾಜ್ ಉದ್ ದೌಲನು ಧಾರ್ಮಿಕ ಮತಾಂಧನಾಗಿದ್ದು, ಹಿಂದೂಗಳಿಗೆ ಬ್ರಿಟೀಷರು ಆಶ್ರಯ ನೀಡಿದ್ದು ನವಾಬನನ್ನು ಕೆರಳಿಸಿತು.
- ನವಾಬ ಸಿರಾಜ್ ಉದ್ ದೌಲನು ಇಂಗ್ಲೀಷರ ವ್ಯಾಪಾರ ಕೇಂದ್ರಗಳಾದ ಖಾಸಿಂ ಬಜಾರ್, ಕಲ್ಕತ್ತಾಗಳನ್ನು ಆಕ್ರಮಿಸಿಕೊಂಡಿದ್ದು, ಬ್ರಿಟೀಷರನ್ನು ಯುದ್ದಕ್ಕೆ ಪ್ರೇರೇಪಿಸಿತು.
ಪ್ಲಾಸಿ ಕದನದ ತತಕ್ಷಣದ ಕಾರಣಗಳು :
ಬಂಗಾಳದಲ್ಲಿ ಶಾಶ್ವತ ಬ್ರಿಟೀಷ್ ಸಾಮ್ರಾಜ್ಯ ಸ್ಥಾಪಿಸುವ ಉದ್ದೇಶದಿಂದ ಸಿರಾಜ್ ಉದ್ದೌಲನು ಬ್ರಿಟೀಷರಿಗೆ ನಿಗದಿತ ಮೊತ್ತ ಕೊಡುತ್ತಿಲ್ಲವೆಂದು ಮತ್ತು ಫ್ರೆಂಚರೊಂದಿಗೆ ನವಾಬ ಸ್ನೇಹಯುತವಾಗಿದ್ದಾನೆಂಬ ನೆಪ ಹೇಳಿ ರಾಬರ್ಟ್ ಕ್ಲೈವ್ ಯುದ್ದ ಪ್ರಾರಂಭಿಸಿದನು.
ಪ್ಲಾಸಿ ಕದನದ ಗತಿ :
- ನವಾಬನ ಸೈನ್ಯದ ನಾಯಕತ್ವ ಮೀರಜಾಫರ್ ವಹಿಸಿದ್ದು, ಬ್ರಿಟೀಷರ ಕುತಂತ್ರದಿಂದ ಅವನು ನೆಪ ಮಾತ್ರಕ್ಕೆ ಯುದ್ದದಲ್ಲಿ ಭಾಗವಹಿಸಿದನು.
- ಸಿರಾಜ್ ಉದ್ದೌಲನ ಸೇನಾನಿಗಳಾದ ಮೀಹನ್ ಲಾಲ್ ಮತ್ತು ಮೀರ್ ಮದನ್ ವೀರಾವೇಶದಿಂದ ಹೋರಾಡಿ ನಿಧನರಾದರು. ಆದರೆ ಮೀರಜಾಫರ್ ಮತ್ತು ಸೇನಾನಿ ರಾಯದರ್ಲಬರು ವಿಶ್ವಾಸಘಾತಕರಾಗಿ ವರ್ತಿಸಿ ಹೋರಾಡದೇ ತಟಸ್ಥರಾಗಿ ಉಳಿದರು.
- ನವಾಬ ತನ್ನ ಪತ್ನಿ ಉನ್ನೀಸಳೊಂದಿಗೆ ಮುರ್ಷಿದಾಬಾದ್ ಗೆ ಓಡಿ ಹೋದನು. ಮೀರ್ ಜಾಫರ್ ನ ಮಗ ಮಿರಾನನಿಂದ ನವಾಬ ಕೊಲೆಯಾದನು.
ಪ್ಲಾಸಿ ಕದನದ ಪರಿಣಾಮಗಳು :
- ಮೀರ್ ಜಾಫರ್ ಬಂಗಾಳದ ನಾಮಮಾತ್ರ ನವಾಬನಾದನು.
- ರಾಜಕೀಯವಾಗಿ ಬ್ರಿಟೀಷರು ಬಂಗಾಳದ ನೈಜ ಒಡೆಯರಾದರು.
- ಮೀರ್ ಜಾಫರ್ ಕಲ್ಕತ್ತಾ ಬಳಿ 24 ಪರಗಣಗಳ ಜಮೀನ್ದಾರಿಕೆಯನ್ನು ಬ್ರಿಟೀಷರಿಗೆ ಬಿಟ್ಟುಕೊಟ್ಟನು.
- ನವಾಬ 1 ಕೋಟಿ 73 ಲಕ್ಷ ಯುದ್ದ ವೆಚ್ಚಕ್ಕಾಗಿ ಕೊಟ್ಟನು.
- ಕಂಪನಿಗೆ ಬಂಗಾಳ, ಬಿಹಾರ ಮತ್ತು ಒಡಿಶಾಗಳಲ್ಲಿ ತೆರಿಗೆ ರಹಿತ ವ್ಯಾಪಾರ ನಡೆಸಲು ಹಕ್ಕುಗಳನ್ನು ನೀಡಲಾಯಿತು.
- ಬಕ್ಸಾರ್ ಕದನಕ್ಕೆ ಸ್ಪೂರ್ತಿಯಾಯಿತು.
FAQ :
ಪ್ಲಾಸಿ ಕದನಕ್ಕೆ ರಾಜಕೀಯ ಕಾರಣಗಳನ್ನು ತಿಳಿಸಿ?
ಆಲಿವರ್ಧಿಖಾನನ 2ನೇ ಮಗಳ ಮಗ ಮತ್ತು ಪೂರ್ನಿಯಾದ ಸುಬೇದಾರನಾಗಿದ್ದ ಶೌಕತ್ ಸಿಂಗ್, ಮೊದಲ ಮಗಳಾದ ಢಾಕಾದ ಘಸ್ತಿ ಬೇಗಂ, ಘಸ್ತಿ ಬೇಗಳಂ ದಿವಾನನಾಗಿದ್ದ ರಾಜವಲ್ಲಬ್, ರಾಜವಲ್ಲಬನ ಮಗ ಕಿಶನದಾಸ್ /ಕೃಷ್ಣ ವಲ್ಲಬ್ ಈ ಎಲ್ಲಾ ಸದಸ್ಯರು ನವಾಬ ವಿರುದ್ದ ದಂಗೆ ಮತ್ತು ಪಿತೂರಿ ನಡೆಸಿದರು.
ಪ್ಲಾಸಿ ಕದನದ ಒಂದು ಪರಿಣಾಮ ತಿಳಿಸಿ?
ಮೀರ್ ಜಾಫರ್ ಬಂಗಾಳದ ನಾಮಮಾತ್ರ ನವಾಬನಾದನು.
ರಾಜಕೀಯವಾಗಿ ಬ್ರಿಟೀಷರು ಬಂಗಾಳದ ನೈಜ ಒಡೆಯರಾದರು
ಇತರೆ ವಿಷಯಗಳು :
ಮೊಘಲ್ ದೊರೆ ಅಕ್ಬರ್ ನ ಬಗ್ಗೆ ಮಾಹಿತಿ
ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ