ಸೂಫಿ ಪಂಥದ ಬಗ್ಗೆ ಮಾಹಿತಿ Information about the Sufi sect Sufi Panthada bagge Mahithi in Kannada
ಸೂಫಿ ಪಂಥದ ಬಗ್ಗೆ ಮಾಹಿತಿ
![Information about the Sufi sect in Kannada](https://i0.wp.com/kannadanotes.com/wp-content/uploads/2023/03/ಸೂಫಿ-ಪಂಥದ-ಬಗ್ಗೆ-ಮಾಹಿತಿ.jpg?resize=276%2C184&ssl=1)
ಈ ಲೇಖನಿಯಲ್ಲಿ ಸೂಫಿ ಪಂಥದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ಬಲ್ಲಿ ನೀಡಲಾಗಿದೆ.
ಸೂಫಿ ಪಂಥ :
- ಸೂಫಿ ಎಂಬ ಶಬ್ದವು ಸಾಫ್ ಎಂಬ ಅರೇಬಿಯಾ ಪದದಿಂದ ಬಂದಿದೆ.
- ಸಾಫ್ ಎಂದರೆ ಉಣ್ಣೆ ಎಂದರ್ಥ/ಪರಿಶುದ್ದ ನಡತೆಯುಳ್ಳವನೆಂದರ್ಥ.
- ಸೂಫಿ ಸಂತರು ಉಣ್ಣೆಯ ನಿಲುವಂಗಿಯನ್ನು ಧರಿಸುತ್ತಿದ್ದರಿಂದ ಸೂಫಿ ಎಂಬ ಪದ ಬಂದಿದೆ.
- ದೆಹಲಿ ಸುಲ್ತಾನರ ಕಾಲದಲ್ಲಿ ಇಸ್ಲಾಂ ಧರ್ಮದ ಮೇಲೆ ಹಿಂದೂ ಧರ್ಮದ ಪ್ರಭಾವದಿಂದ ಸೂಫಿ ಪಂಥ ಉದಯಿಸಿತು.
- ಭಾರತದಲ್ಲಿ ಮೊದಲು ಸೂಫಿ ಪಂಥ ಪ್ರಚಾರ ಮಾಡಿದವರು – ಆಲ್ ಹುಜಿವಿ
- ಸೂಫಿ ಸಂತರ ಗುಡಿಸಲುಗಳನ್ನು – ಖಾಹಂಕಗಳು ಎನ್ನುವರು.
- ಮುಸ್ಲೀಂ ಸಂತರಿಗೆ ಔಲಿಯಾ ಎನ್ನುತ್ತಿದ್ದರು.
- ಸೂಫಿ ಪಂಥದ ಉದ್ದೇಶಗಳು – ಸ್ವಾವಲಂಬನೆ ಸಾಧಿಸುವುದು, ಮಾನವ ಸೇವೆ ಮಾಡುವುದು, ಹಿಂದೂ ಮುಸ್ಲೀಮರ ಏಕತೆ.
ಸೂಫಿ ಪಂಥದ ಪಂಥಗಳು :
ಚಿಸ್ತಿ ಪಂಥ :
- ಖ್ವಾಜಾ ಅಬ್ದುಲ್ ಚಿಸ್ತಿ ಸ್ಥಾಪಿಸಿದರು.
- ಚಿಸ್ತಿ ಪಂಥವು ಲಾಹೋರ್, ನಾಗೌರ್, ಬದೌನ್, ಅಜ್ಮೀರ್, ಮುಲ್ತಾನ, ಸಿಂಧ್ ಮತ್ತು ಹನ್ಸಿಗಳಲ್ಲಿ ಜನಪ್ರಿಯವಾಗಿ ರೂಢಿಯಲ್ಲಿತ್ತು.
- ಚಿಸ್ತಿ ಪಂಥದ ಪ್ರಮುಖ ಸಂತರು – ಮೊಯಿನುದ್ದೀನ್ ಚಿಸ್ತಿ, ಫರಿದುದ್ದೀನ್ ಶಕರ್, ಷೇಕ್ ನಿಜಾಮುದ್ದೀನ್ ಔಲಿಯಾ, ಷೇಕ್ ಸಲೀಂ ಚಿಸ್ತಿ, ಷೇಕ್ ಬಂದೇ ನವಾಜ್ ಮತ್ತು ಹಮೀದ್ ಉದ್ ನಗೌರಿ.
ಸುಹರ್ವರ್ದಿ ಪಂಥ :
- ಬಾಗ್ದಾದಿನ ಷೇಕ್ ಶಹಾಬುದ್ದೀನ್ ಸ್ಥಾಪಿಸಿದರು.
- ಸುಹರ್ವರ್ದಿ ಪಂಥವು ಬಿಹಾರ, ಬಂಗಾಳದಲ್ಲಿ ರೂಢಿಯಲ್ಲಿತ್ತು.
- ಅಬುಲ್ ಫಜಲ್ ನ ಪ್ರಕಾರ ಸೂಫಿಗಳಲ್ಲಿ 14 ಪಂಥಗಳಿದ್ದವು. ಅವುಗಳೆಂದರೆ, ಫಿರ್ ದೌಸಿ, ಖಾದ್ರಿ, ಶತ್ತಾರ, ಮಹದಾವಿ, ರೌಷನಿಯತ್, ಮತ್ತು ನಕ್ಚ್ ಬಂದಿ.
ಸೂಫಿ ಪಂಥದ ಪ್ರಮುಖ ತತ್ವಗಳು :
- ದೇವರು ಸರ್ವಶಕ್ತ, ಜಗತ್ತಿನ ಸೃಷ್ಟಿಕರ್ತ, ಮುಕ್ತಿಗೆ ಭಕ್ತಿಯೇ ಪ್ರಧಾನ.
- ದೇವರು ಒಬ್ಬನೇ, ಮಾನವರೆಲ್ಲರೂ ಅವನ ಮಕ್ಕಳು.
- ನಮಾಜ್, ರೋಜಾ ಮತ್ತು ಹಜ್ ಗಳಲ್ಲಿ ನಂಬಿಕೆ ಇರಲಿಲ್ಲ ಮತ್ತು ಕಾಯಕಕ್ಕೆ ಮಹತ್ವ ನೀಡಿದ್ದರು.
- ಬ್ರಹ್ಮಚರ್ಯ, ಸನ್ಯಾಸ ಜೀವನಕ್ಕೆ ವಿರುದ್ದ.
- ಮಾನವನು ಶ್ರೇಷ್ಠನಾಗುವುದು ಕಾರ್ಯದಿಂದ, ಗುಣ ಕರ್ಮದಿಂದ ಹೊರತು ಧರ್ಮದಿಂದಲ್ಲ.
- ದೇಚರ ಪ್ರೀತಿಗೆ ಪಾತ್ರರಾಗಬೇಕಾದರೆ ಇತರರನ್ನು ಪ್ರೀತಿಸಬೇಕು.
ಪ್ರಮುಖ ಸೂಫಿ ಸಂತರು :
ಷೇಕ್ ಮುಯಿನುದ್ದೀನ್ ಚಿಸ್ತಿ :
- ಚಿಸ್ತಿ ಪಂಥದ ಸ್ಥಾಪಕ
- ಪರ್ಷಿಯಾದಿಂದ 1192ರಲ್ಲಿ ಭಾರತಕ್ಕೆ ಬಂದನು.
- ಮಾನವರೆಲ್ಲರೂ ಸರಿಸುಮಾರು, ಹಿಂದೂ ಮುಸ್ಲಿಂರು ಸಂಕುಚಿತ ಭಾವನೆ ತೊರೆದು ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳಬೇಕು.
- ಭಕ್ತಿಯಿಂದ ಜನಸೇವೆ ಮಾಡಬೇಕೆಂದರು.
- ಆತ್ಮ ಮತ್ತು ಪರಮಾತ್ಮ ಎರಡೂ ಒಂದೇ ಎಂದು ಶಂಕರರ ಅದ್ವೈತ ಸಿದ್ದಾಂತವನ್ನು ಬೋಧಿಸಿದರು.
- ಷೇಕ್ ಮುಯಿನುದ್ದೀನ್ ಚಿಸ್ತಿಯು 1236ರಲ್ಲಿ ನಿಧನರಾದರು.
- ಇವರ ದರ್ಗಾ ಇರುವುದು – ಅಜ್ಮೀರ್
- ಭಗವಂತನ ಹತ್ತಿರ ಸಾಗಲು ಭಕ್ತಿಗೀತೆ ಒಂದೇ ಸಾಧನ ಎಂದು ಸಾರಿದರು.
ಷೇಕ್ ನಿಜಾಮುದ್ದೀನ್ ಔಲಿಯಾ :
- 1236ರಲ್ಲಿ ಬದೌನಿಯಲ್ಲಿ ಜನಿಸಿದರು.
- ಬಾಬಾ ಫರೀದ್ ನ ಶಿಷ್ಯ
- ಔಲಿಯಾ ಎಂದರೆ – ದೇವರ ಪ್ರತಿನಿಧಿ
- ಹಿಂದೂ ಮುಸ್ಲಿಂರ ಭಾವೈಕ್ಯತೆ ಪ್ರತಿಪಾದಿಸಿ ದೆಹಲಿ ಸುಲ್ತಾನನನ್ನು ಕೆರಳಿಸಿದ.
- ನಿಜಾಮುದ್ದೀನ್ ಔಲಿಯಾ ದರ್ಗಾ- ದೆಹಲಿಯಲ್ಲಿದೆ.
- ಅಮೀರಖುಸ್ರು ನಿಜಾಮುದ್ದೀನ್ ಔಲಿಯಾನ ಶಿಷ್ಯನಾಗಿದ್ದನು.
ಷೇಕ್ ಸಲೀಂ ಚಿಸ್ತಿ :
- ಅಕ್ಬರನ ಸಮಕಾಲೀನ ಸೂಫಿ ಸಂತ
- ಅಕ್ಬರನ ಹರಕೆಯಂತೆ ಜಹಾಂಗೀರ್ ಜನಿಸಿದ್ದರಿಂದ ಸಲೀಂ ಎಂಬ ಹೆಸರಿಟ್ಟನು.
- ಷೇಕ್ ಸಲೀಂ ಚಿಸ್ತಿಯ ದರ್ಗಾ ಇರುವುದು – ಉತ್ತರ ಪ್ರದೇಶದ ಫತೇಪುರ ಸಿಕ್ರಿ
- 1580ರಲ್ಲಿ ಸಲೀಂ ಚಿಸ್ತಿಯ ದರ್ಗಾ ಮೊಘಲರು ಕಟ್ಟಿಸಿದರು.
ಖ್ವಾಜಾ ಬಂದೇ ನವಾಜ್ :
- ಮೊದಲ ಹೆಸರು – ಸೈಯದ್ ಮಹ್ಮದ್ ಹುಸೇನ್
- ಗುಲ್ನರ್ಗಾದ ಶ್ರೇಷ್ಠ ಸೂಫಿ ಸಂತ
- ಬಿರುದುಗಳು – ಗೇಸುದರಾಜ್ ಮತ್ತು ಬಂದೇನವಾಜ್
- ಗುರು – ನಿಜಾಮುದ್ದೀನ್ ಚಿಸ್ತಿ
- ಮೂಲಸ್ಥಳ – ಪರ್ಷಿಯಾದ ಹೀರತ್
- “ದಖನಿ ಉರ್ದು ಸಾಹಿತ್ಯದ ಪಿತಾಮಹಾ ಎಂದೇ ಖ್ಯಾತಿಯಾಗಿದ್ದರು.
- ಖ್ವಾಜಾ ಬಂದೇ ನವಾಜ್ ದರ್ಗಾ ಇರುವುದು – ಕಲ್ಬುರ್ಗಿ
ಸೂಫಿ ಸಂತರು ಮತ್ತು ದರ್ಗಾಗಳು :
- ಷೇಕ್ ಬಹಾವುದ್ದೀನ್ ಜಕಾರಿಯಾ – ಮುಲ್ತಾನ್
- ಷೇಕ್ ಇಸ್ಮಾಯಿಲ್ ದಂತಾಗಂಜ್ – ಬಿಕ್ಷ್
- ಟಿಪ್ಪು ಮಸ್ತಾರ ಔಲಿಯಾ – ಆರ್ಕಾಟ್
- ಷೇಕ್ ಫರೀದಾ ಯಜ್ದಾನಿ – ದೆಹಲಿ
- ಹಜರತ್ ಸೈಯದ್ ಕ್ವಾತಲಾ ಷಾ – ಬೆಳಗಾವಿ
- ಮುರ್ತಾಜ್ ಖಾದರಿ – ವಿಜಯಪುರ
- ಹಜರತ್ ಬುರಸುದ್ದೀನ್ ಷಾ – ಬಾಬಾ ಬುಡನಗಿರಿ
- ಹಜರತ್ ದಾಲಿವುಲ್ಲಾ ಖಾದರಿ – ಧಾರವಾಡ
FAQ :
ಖ್ವಾಜಾ ಬಂದೇ ನವಾಜ್ ದರ್ಗಾ ಎಲ್ಲಿದೆ?
ಕಲ್ಬುರ್ಗಿ
ಸಾಫ್ ಎಂದರೆ ಏನು?
ಉಣ್ಣೆ ಎಂದರ್ಥ/ಪರಿಶುದ್ದ ನಡತೆಯುಳ್ಳವನೆಂದರ್ಥ.
ಇತರೆ ವಿಷಯಗಳು :