ಕ್ರಾಂತಿಕಾರರ ಬಗ್ಗೆ ಮಾಹಿತಿ Information about revolutionaries Kranthikarara bagge Mahithi in Kannada
ಕ್ರಾಂತಿಕಾರರ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕ್ರಾಂತಿಕಾರರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕ್ರಾಂತಿಕಾರರ ಚಟುವಟಿಕೆಗಳು :
- 1890ರ ದಶಕದಲ್ಲಿ ಭಾರತವು ತೀವ್ರ ಬರಗಾಲ ಮತ್ತು ಫ್ಲೇಗ್ ರೋಗಕ್ಕೆ ತುತ್ತಾಗಿತ್ತು. ಫ್ಲೇಗ್ ಸಂತ್ರಸ್ತರಿಗೆ ನೆರವನ್ನು ನೀಡಲು ಬ್ರಿಟೀಷ್ ಸರ್ಕಾರ ನೇಮಿಸಿದ ಆಯೋಗ – “ರ್ಯಾಂಡ್ ಅಂಡ್ ಐಯರೆಸ್ಟ್” 1987ರಲ್ಲಿ ಚಾಪೇಕರ್ ಸಹೋದರರು ರ್ಯಾಂಡ್ ಮತ್ತು ಐಯರೆಸ್ಟ್ ಹತ್ಯೆ ಮಾಡಿದರು. ಇದು ಭಾರತದ ಮೊದಲ ರಾಜಕೀಯ ಹತ್ಯೆ.
- 1905ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದನು. ಬಂಗಾಳ ವಿಭಜನೆಯ ಪ್ರಮುಖ ಪರಿಣಾಮ – ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿ. ಈ ಚಳುವಳಿಯ ಸಮಯದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ವ್ಯಾಪಕಗೊಂಡವು.
- 1909ರಲ್ಲಿ ನಾಗರೀಕ ಸೇವಾ ಅಧಿಕಾರಿ ಕರ್ಜನ್ ವೈಲಿಯನ್ನು ಮದನಲಾಲ್ ದಿಂಗ್ರಾ ಎಂಬ ಕ್ರಾಂತಿಕಾರಿ ಹತ್ಯೆಗೈಯ್ದನು. ಕರ್ಜನ್ ವೈಲಿ ಹತ್ಯೆಗೆ ಸಂಬಂಧಿಸಿದಂತೆ ಆಗಸ್ಟ್ 17, 1909 ರಂದು ಮದನಲಾಲ ದಿಂಗ್ರಾರನ್ನು ಲಂಡನನಲ್ಲಿ ಗಲ್ಲಿಗೇರಿಸಲಾಯಿತು.
- 1924ರಲ್ಲಿ ಕಲ್ಕತ್ತಾದ ಪೊಲೀಸ್ ಕಮಿಷನರ್ ಚಾರ್ಲ್ಸ್ ಥೆಗಾಟರನ್ನು ಹತ್ಯಗೈಯಲು ವಿಫಲ ಯತ್ನ ನಡೆಸಿದರು. ಅರ್ನೆಸ್ಟ್ ಡೇ ರವರು ಈ ಪ್ರಯತ್ನದಲ್ಲಿ ಹತ್ಯೆಗೊಳಗಾದಾಗ ಗೋಪಿನಾಥ್ ಸಹಾ ಅವರನ್ನು ಬ್ರಿಟೀಷ್ ಸರ್ಕಾರ ಗಲ್ಲಿಗೇರಿಸಿತು. ಇದಕ್ಕೆ ಸಂಬಂಧಿಸಿದಂತೆ ಸುಭಾಸ್ ಚಂದ್ರ ಬೋಸ್ ರವರನ್ನು ಬ್ರಿಟೀಷ್ ಸರ್ಕಾರ ಬಂಧಿಸಿತು.
ಕ್ರಾಂತಿಕಾರಿಗಳು ನಡೆಸಿದ ಪ್ರಮುಖ ಪಿತೂರಿಗಳು :
ಆಲಿಪುರ್ ಬಾಂಬ್ ಪ್ರಕರಣ 1908 :
- 1908ರಲ್ಲಿ ಮುಜಾಫರ್ ಪುರ್ ಜಿಲ್ಲೆಯ ನ್ಯಾಯಾಧೀಶ “ಡೌಗ್ಲೌಸ್ ಕಿಂಗ್ಸ್ ಫರ್ಡ್” ನನ್ನು ಹತ್ಯೆಗೈಯಲು ಖುದಿರಾಮ್ ಬೋಸ್ ಮತ್ತು ಪ್ರಪುಲ್ಲ ಚಂದ್ರ ಚಾಕಿ ಯತ್ನಿಸಿದಾಗ ಘಟನೆಯಲ್ಲಿ ಕಿಂಗ್ಸ್ ಫರ್ಡ್ ಬದುಕುಳಿದರು ಇಬ್ಬರು ಬ್ರಿಟೀಷ್ ಮಹಿಳೆಯರಾದ ಕೆನಡಿ ಮತ್ತು ಪ್ರಿನ್ಲೆ ಕೆನಡಿ ಹತ್ಯೆಯಾದರು.
- ಆಲಿಪುರ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟೀಷರು ಅರವಿಂದೋ ಘೋಷ್ ಮತ್ತು ಬರೀಂದ್ರ ಕುಮಾರ್ ಘೋಷ್ ರನ್ನು ಬಂಧಿಸಿ ಅಂಡಮಾನ್ ನಿಕೋಬಾರ್ ದ್ವೀಪದ ಕಾಲಾಪಾನಿ ಜೈಲಿಗೆ ಗಡಿಪಾರು ಮಾಡಿದರು.
- ಆಲಿಪುರ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದೋ ಘೋಷ್ರವರ ಪರವಾಗಿ ವಾದಿಸಿದವರು – ಚಿತ್ತರಂಜನ್ ದಾಸ್
- ಮಂಡೇಲಾ ಜೈಲಿನಲ್ಲಿ ತಿಲಕರು ಬರೆದ ಪುಸ್ತಕ – ಗೀತಾ ರಹಸ್ಯ
- ಈ ಪ್ರಕರಣದಲ್ಲಿ ಖುದಿರಾಮ್ ಬೋಸ್ ರನ್ನು ಬ್ರಿಟೀಷ್ ಸರ್ಕಾರ ಗಲ್ಲಿಗೇರಿಸಿತು.ಬ್ರಿಟೀಷ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಯುವ ಕ್ರಾಂತಿಕಾರಿಗಳಲ್ಲಿ ಒಬ್ಬರು.
- ಪ್ರಫುಲ್ಲ ಚಾಕಿ ತನ್ನನ್ನು ತಾನು ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡನು.
- ಬ್ರಿಟೀಷರಿಗೆ ಸಂಚನ್ನು ಬಯಲುಗೊಳಿಸಿದ “ನರೇಂದ್ರ ಗೋಸ್ವಾಮಿ”ಯವರನ್ನು ಕನ್ನಯಲಾಲ್ದತ್ ಮತ್ತು ಸತ್ಯೇಂದ್ರನಾಥ್ ಕೊಂದರು.
ನಾಸಿಕ್ ಪಿತೂರಿ – 1909 :
- ಕ್ರಾಂತಿಕಾರಿ ಗುಪ್ತಚರ ಸಂಘಟನೆಗಳಾದ ʼಅಭಿನವ ಭಾರತ ಮತ್ತು ಮಿತ್ರಮೇಳʼ ಗಳನ್ನು ಸಾರ್ವಕರ್ ಸಹೋದರರು ಸ್ಥಾಪಿಸಿದರು.
- ಅಭಿನವ ಭಾರತ ಸೊಸೈಟಿಯ ಚಟುವಟಿಕೆಗಳು ನಾಸಿಕನಲ್ಲಿ ವ್ಯಾಪಕಗೊಂಡವು.
- 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಪ್ರಕಟಿಸಿದಕ್ಕೆ ಯಾವುದ್ಯಾವುದೋ ನೆಪಗಳನ್ನು ನೀಡಿ ಜಾಕ್ಸನ್ ಸಾರ್ವಕರ್ ರವರನ್ನು ಕಾಲಾಪಾನಿ ಜೈಲಿಗೆ ಗಡಿಪಾರು ಮಾಡಿದರು.
- ಅಭಿನವ ಭಾರತ ಸೊಸೈಟಿಯ ಸದಸ್ಯನಾದ ಅನಂತ ಲಕ್ಷ್ಮಣ ಕರ್ಕೆರೆ ಯವರು ನಾಸಿಕನ ಜಿಲ್ಲಾಧಿಕಾರಿ ಜಾಕ್ಸನ್ರವರು ವರ್ಗಾವಣೆಯ ಗೌರವಕ್ಕೆ ನಾಟಕ ನಡೆಸುತ್ತಿದ್ದ ಸಂದರ್ಭದಲ್ಲಿ ಎಎಂಟಿ ಜಾಕ್ಸನ್ ರನ್ನು ಹತ್ಯೆಗೈದನು.
- ಅಭಿನವ ಭಾರತ ಸೊಸೈಟಿಯ 27 ಸದಸ್ಯರನ್ನು ಬ್ರಿಟೀಷ್ ಸರ್ಕಾರ ಬಂಧಿಸಿ ವಿಚಾರಣೆಗೊಳಪಡಿಸಿತು.
ಹೌರಾ ಮತ್ತು ಸಿಬ್ಪುರ್ ಪಿತೂರಿ – 1910 :
- ಸಂಶುಲ್ ಆಲಂ ಎಂಬ ಬ್ರಿಟೀಷ್ ಪೊಲೀಸ್ ನಿರೀಕ್ಷಕ ʼಆಲಿಪುರ್ ಬಾಂಬ್ ಪ್ರಕರಣʼ ದ ಪ್ರಮುಖ ರೂವಾರಿ – ನರೇನ್ ಗೋಸೈನರ ಹತ್ಯೆಯ ತನಿಖೆಯನ್ನು ನಡೆಸಿದರು.
- ಬಂಗಾಳದ ಅನುಶೀಲನಾ ಸಮಿತಿಗೆ ಸೇರಿದ 47 ಮಂದಿ ಸದಸ್ಯರನ್ನು ಪೊಲೀಸ್ ನಿರೀಕ್ಷಕ ʼಸಂಶುಲ್ ಆಲಂʼ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಿತು.
- ಒಟ್ಟು 47 ಸದಸ್ಯರಲ್ಲಿ 33 ಸದಸ್ಯರನ್ನು ಬ್ರಿಟೀಷ್ ಸರ್ಕಾರ ಬಿಡುಗಡೆ ಮಾಡಿತು.
- ಜತಿನ್ ಮುಖರ್ಜಿ ಮತ್ತು ನರೇಂದ್ರ ಭಟ್ಟಾಚಾರ್ಯಜೀ ಯವರಿಗೆ ಒಂದು ವರ್ಷದ ಜೈಲುವಾಸವನ್ನು ವಿಧಿಸಿತು.
ದೆಹಲಿ ಪಿತೂರಿ – 1912 :
- 1905 ಅಕ್ಟೋಬರ್ 16 ರಂದು ಲಾರ್ಡ್ ಕರ್ಜನ್ ಹಿಂದೂ ಮುಸ್ಲಿಂರ ಏಕತೆಯನ್ನು ಬೇರ್ಪಡಿಸಲು ಬಂಗಾಳವನ್ನು ವಿಭಜಿಸಿದನು.
- 1911 ರಲ್ಲಿ ಲಾರ್ಡ್ ಹಾರ್ಡಿಂಜ್ – 2 ಬಂಗಾಳದ ವಿಭಜನೆಯನ್ನು ರದ್ದುಪಡಿಸಿ, ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿದನು.
- ಲಾರ್ಡ್ ಹಾರ್ಡಿಂಜ್ -2 ದೆಹಲಿಯ ಚಾಂದಿನಿ ಚೌಕ ಪ್ರವೇಶಿಸುವಾಗ ರಾಸ್ ಬಿಹಾರಿ ಬೋಸ್ ಮತ್ತು ಸಚಿನ್ ಸನ್ಯಾಲರವರು ಹತ್ಯೆಗೈಯಲು ಯತ್ನಿಸಿದರು, ವಿಫಲವಾಯಿತು.
- ಬ್ರಿಟೀಷ್ ಸರ್ಕಾರ ರಾಸ್ ಬಿಹಾರಿ ಬೋಸ್ ಮತ್ತು ಸಚಿನ್ ಸನ್ಯಾಲ್ ರನ್ನು ಬಂಧಿಸಿದರು.
- ದೆಹಲಿ ಪಿತೂರಿಗೆ ಸಂಬಂಧಿಸಿದಂತೆ ಅಮಿರ ಚಂದ್, ಅವಧ್ ಬಿಹಾರಿ, ಬಸಂತ್ ಕುಮಾರ್ ಬಿಸ್ವಾಸರನ್ನು ಬ್ರಿಟೀಷರು ಬಂಧಿಸಿದರು.
ಕಾಮಘಟ ಮಾರು ದುರಂತ – 1914 :
- ಕಾಮಘಟ ಮಾರು ಎಂಬುದು – ಜಪಾನಿನ ನೌಕೆ ಇದರ ಮುಖ್ಯಸ್ಥ – ಗುರ್ದಿತ್ ಸಿಂಗ್
- 376 ಭಾರತೀಯ ವಲಸೆಗಾರರು ಸಿಂಗಾಪುರದಿಂದ ಕೆನಡಾದ ವ್ಯಾಂಕೋವರ್ ಗೆ ಹೊರಟಿದ್ದರು. ಆದರೆ ಕೆನಡಾ ಸರ್ಕಾರ ನೌಕೆಯನ್ನು ಕೆನಡಾ ಪ್ರವೇಶಿಸಲು ಅನುಮತಿ ನೀಡುವುದಿಲ್ಲ.
- ಇದರಿಂದ ಸಿಟ್ಟಿಗೆದ್ದ ಕೆನಡಾದಲ್ಲಿದ್ದ ಭಾರತೀಯ ಕ್ರಾಂತಿಕಾರಿ ʼಮೇವಾಸಿಂಗ್ʼ ಅಲ್ಲಿನ ಅಧಿಕಾರಿ ʼ ಹಾಪಕಿನ್ಸ್ʼ ನನ್ನು ಕೊಂದನು.
- ಅಲ್ಲಿಂದ ಹಿಂದುರಿಗಿದ ನೌಕೆಯ ಕಲ್ಕತ್ತಾದ ಬಡ್ಜ್ ಬಡ್ಜ್ ಬಂದವರಿಗೆ ಬಂದಾಗ ಅಧಿಕೃತ ಪರವಾನಗಿ ಇಲ್ಲವೆಂದು ಶೋಧನೆಗೆ ಒಳಪಡಿಸಿದಾಗ ಬ್ರಿಟೀಷರು ಮತ್ತು ರಾಷ್ಟ್ರೀಯವಾದಿಗಳ ನಡುವೆ ಗಲಭೆಗಳುಂಟಾಗಿ 22 ಜನ ರಾಷ್ಟ್ರೀಯವಾದಿಗಳು ಸಾವನ್ನಪ್ಪಿದರು.
- ಹಲವರನ್ನು ಪಂಜಾಬ್ ಗೆ ಕಳುಹಿಸಿ ಉಗ್ರ ಶಿಕ್ಷೆಯನ್ನು ನೀಡಲಾಯಿತು.
- ಕಾಮಘಟ ಮಾರು ದುರಂತದಲ್ಲಿ ಭಾಗವಹಿಸಿದ ಪ್ರಮುಖ ನಾಯಕರು – ಗದ್ದರ್ ಪಕ್ಷದ ಸೋಹನಸಿಂಗ್ ಭಕ್ನ, ಮಾಸ್ಟರ್ ತಾರಾಸಿಂಗ್, ಕರ್ತಾರ್ ಸಿಂಗ್ ಜಬ್ಬರ್, ಬರ್ಕತುಲ್ಲಾ ಮತ್ತು ತಾಯಿ ಪರಮಾನಂದ.
ಪೇಷಾವರ ಪಿತೂರಿ 1922-1927 :
- 1917 ರ ರಷ್ಯಾ ಕ್ರಾಂತಿಯಿಂದ ಪ್ರೇರಿತವಾದ ಭಾರತೀಯ ಕ್ರಾಂತಿಕಾರರು ಕಮ್ಯುನಿಸ್ಟ್ ತರಬೇತಿ ಪಡೆಯಲು ರಷ್ಯಾ ಮಾಸ್ಕೋಗೆ ಪೇಷಾವರದ ಕ್ರಾಂತಿಕಾರಿ ಸಂಘಟನೆಯಾದ ʼಮುಜಾಹಿರ್ʼಗಳು ತೆರಳಿದರು.
- ಕಮ್ಯುನಿಸ್ಟ್ ತರಬೇತಿ ಪಡೆದು ಭಾರತಕ್ಕೆ ಬಂದು ಬ್ರಿಟೀಷ್ ಸರ್ಕಾರಕ್ಕೆ ತೊಂದರೆಯನ್ನುಂಟು ಮಾಡಿದರು.
- ಬ್ರಿಟೀಷ್ ಸರ್ಕಾರ ರಾಷ್ಟ್ರೀಯವಾದಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದರು. ಇದನ್ನು ʼಪೇಷಾವರ ಪಿತೂರಿʼ ಎನ್ನುವರು.
- ಪೇಷಾವರ ಪಿತೂರಿಯು 1924ರ ಕಾನ್ಪುರ ಬೋಲ್ಷೆವಿಕ್ ಪಿತೂರಿಗೆ ಕಾರಣವಾಯಿತು.
ಕಾಕೋರಿ ಪಿತೂರಿ – 1924 :
- ಕಾಕೋರಿ ಪಿತೂರಿ ಎಂಬುದು ರೈಲು ಡಕಾಯ್ತಿ ಪ್ರಕರಣವಾಗಿದೆ.
- ಶಹಾರಾನಪುರ ಮತ್ತು ಲಕ್ನೋ ನಡುವಿನ ಸ್ಥಳವೇ ಕಾಕೋರಿ.
- ಹಿಂದೂಸ್ತಾನ್ ರಿಪಬ್ಲಿಕನ್ ಆರ್ಮಿ – 1924ರಲ್ಲಿ ಕಾನ್ಪುರದಲ್ಲಿ ಸ್ಥಾಪನೆಯಾಯಿತು.
- ಕಾಕೋರಿ ಪಿತೂರಿಯಲ್ಲಿ ತೊಡಗಿದ್ದವರು – ಹಿಂದೂಸ್ತಾನ್ ರಿಪಬ್ಲಿಕನ್ ಸೈನ್ಯ
- HRA ಸದಸ್ಯರು ಸರ್ಕಾರಿ ಖಜಾನೆಯನ್ನು ದೋಚಿದರು.
- ಕಾಕೋರಿ ಪಿತೂರಿಯ ಪ್ರಮುಖ ಕ್ರಾಂತಿಕಾರರು – ರಾಮ್ ಪ್ರಸಾದ್ ಬಿಸ್ಮಿಲ್ಲಾ, ಅಶ್ಪಕುಲ್ಲಾ ಖಾನ್, ರಾಜೇಂದ್ರ ಲಾಹಿರಿ ಮತ್ತು ರೋಷನಲಾಲ್.
ಮೀರತ್ ಪಿತೂರಿ – 1929 :
- ಕಮ್ಯುನಿಸ್ಟ್ ಚಿಂತನೆಗಳಿಂದ ಪ್ರೇರಿತರಾಗಿ ಭಾರತೀಯ ಮತ್ತು ಯುರೋಪಿನ ಕಾರ್ಮಿಕ ಮುಖಂಡರು ಟ್ರೇಡ್ ಯೂನಿಯನ್ ಚಳುವಳಿಯಲ್ಲಿ ಭಾಗವಹಿಸಿದರು.
- ಟ್ರೇಡ್ ಯೂನಿಯನ್ ಚಳುವಳಿಯಲ್ಲಿ ಭಾಗವಹಿಸಿದ ಬ್ರಿಟೀಷರು – ಬೆಂಜಮಿನ್ ಬ್ಲಾಡ್ಲೆ, ಫಿಲಿಪ್ ಸ್ಟ್ರಾಟ್, ಎಸ್.ಎಸ್.ಜೋಶ್, ಹೆಚ್.ಎಲ್.ಹಚಿಸನ್.
- ಟ್ರೇಡ್ ಯೂನಿಯನ್ ಚಳುವಳಿಯಲ್ಲಿ ಭಾಗವಹಿಸಿದ ಭಾರತೀಯರು – ಪಿ.ಸಿ.ಜೋಶಿ, ಎಸ್.ವಿ.ಘಾಟೆ, ಮುಜಾಫರ್ ಅಹ್ಮದ್, ಎಸ್.ಎ.ಡಾಂಗೆ, ಗೋಪಾಲ್ ಬಾಸಕ್.
- ಬ್ರಿಟೀಷ್ ಸರ್ಕಾರ ಈ ನಾಯಕರನ್ನು ಬಂಧಿಸಿ ವಿಚಾರಣೆಗೆ ಒಳಡಿಸಿತು. ಇದು ಐತಿಹಾಸಿಕವಾಗಿ ಮೀರತ್ ಪಿತೂರಿ ಎಂದು ಪ್ರಸಿದ್ದಿ.
ಲಾಹೋರ್ ಪಿತೂರಿ – 1929 :
- 1927ರಲ್ಲಿ ಸೈಮನ್ ಆಯೋಗ ಭಾರತದ ಮುಂಬೈಗೆ ಭೇಟಿ ನೀಡಿದಾಗ ಭಾರತೀಯರು ಬಹಿಷ್ಕರಿಸಿದರು.
- ಸೈಮನ್ ಆಯೋಗದ ವಿರುದ್ದ ಪ್ರತಿಭಟಿಸುತ್ತಿದ್ದಾಗ ಲಾಲಾ ಲಜಪತರಾಯ್ ಗಾಯಗೊಂಡು 1928 ನವೆಂಬರ್ 17ರಂದು ನಿಧನರಾದರು.
- ಲಾಲಾ ಲಜಪತರಾಯವರ ಖಾಸಗೀ ವೈದ್ಯ – ಎನ್.ಎಸ್.ಹರ್ಢೆಕರ್
- ಲಾಲಾ ಲಜಪತರಾಯರ ಸಾವಿಗೆ ಕಾರಣವಾದ ಸ್ಯಾಂಡರ್ಸ್ ನನ್ನು ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ ಹತ್ಯೆಗೈದರು. ಇದು ಲಾಹೋರ್ ಪಿತೂರಿ ಎಂದು ಪ್ರಸಿದ್ದಿ.
- ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರನ್ನು 1931, ಮಾರ್ಚ್ 23 ರಂದು ಲಾಹೋರಿನ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
- ಲಾಹೋರ್ ಪಿತೂರಿಗೆ ಸಂಬಂಧಿಸಿದಂತೆ ʼಜತಿನ್ ದಾಸ್ʼ ಲಾಹೋರ್ ನ ಬೋಸ್ಟಲದ ನಲ್ಲಿ 64 ದಿನಗಳ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡು ನಿಧನನಾದನು.
ಚಿತ್ತಗಾಂಗ್ ಶಸ್ತ್ರಾಗಾರಗಳ ಮೇಲಿನ ದಾಳಿ – 1930 ಏಪ್ರಿಲ್ 18 :
- ನಾಗರೀಕ ಕಾನೂನು ಭಂಗ ಚಳುವಳಿಯ ಸಂದರ್ಭದಲ್ಲಿ ನಡೆದ ಪ್ರಮುಖ ಘಟನೆ.
- ಚಿತ್ತಗಾಂಗ್ ಶಸ್ತ್ರಾಗಾರಗಳ ಮೇಲಿನ ದಾಳಿಯು ಪ್ರಮುಖ ಉದ್ದೇಶ – ಚಿತ್ತಗಾಂಗನ 2 ಶಸ್ತ್ರಾಗಾರಗಳನ್ನು ವಶಪಡಿಸಿಕೊಳ್ಳುವುದು.
- ಬ್ರಿಟೀಷ್ ಸರ್ಕಾರ 65 ಕ್ರಾಂತಿಕಾರರನ್ನು ಗಲ್ಲಿಗೇರಿಸತು. 12 ಜನ ಕ್ರಾಂತಿಕಾರರನ್ನು ಜೀವನ ಪರ್ಯಂತ ಗಡಿಪಾರು ಮಾಡಿತು.
- 1934 ಜನವರಿ 12 ರಂದು ಸೂರ್ಯಸೇನ್ ರನ್ನು ಬ್ರಿಟೀಷ್ ಸರ್ಕಾರ ಗಲ್ಲಗೇರಿಸಿತು.
ಕ್ರಾಂತಿಕಾರಕ ಉದ್ದೇಶಗಳು :
- ಬ್ರಿಟೀಷರ ದುರಾಡಳಿತದ ಬಗ್ಗೆ ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಬರೆಯುವುದು.
- ಸರ್ಕಾರಿ ಕಛೇರಿ ಮತ್ತು ಕಟ್ಟಡಗಳ ಮೇಲೆ ದಾಳಿ ಮಾಡಿ ಬೆಂಕಿ ಇಡುವುದು.
- ಅಂಚೆ, ತಂತಿ, ರೈಲ್ವೆ ಸಂಪರ್ಕ ಕಡಿದು ಹಾಕುವುದು.
- ದೇಶದಲ್ಲಿ ಮತ್ತು ಹೊರಗೆ ಕ್ರಾಂತಿಕಾರಿ ಸಂಘಟನೆಗಳನ್ನು ಸ್ಥಾಪಿಸುವುದು.
- ಬಾಣಬ್ ಗಳನ್ನು ತಯಾರಿಸುವುದು.
- ದುರಹಂಕಾರಿ ಬ್ರಿಟೀಷ್ ಅಧಿಕಾರಿಗಳನ್ನು ಕೊಲ್ಲುವುದು.
FAQ :
ದೆಹಲಿ ಪಿತೂರಿ ಎಷ್ಟರಲ್ಲಿ ನಡೆಯಿತು?
1912
ಕ್ರಾಂತಿಕಾರಕ ಒಂದು ಉದ್ದೇಶ ತಿಳಿಸಿ?
ಬ್ರಿಟೀಷರ ದುರಾಡಳಿತದ ಬಗ್ಗೆ ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಬರೆಯುವುದು.
ಸರ್ಕಾರಿ ಕಛೇರಿ ಮತ್ತು ಕಟ್ಟಡಗಳ ಮೇಲೆ ದಾಳಿ ಮಾಡಿ ಬೆಂಕಿ ಇಡುವುದು
ಇತರೆ ವಿಷಯಗಳು :