ಕರ್ನಾಟಕದ ವ್ಯವಸಾಯದ ಬಗ್ಗೆ ಮಾಹಿತಿ Information about Agriculture in Karnataka Karnatakada Vyavasayada bagge Mahithi in Kannada
ಕರ್ನಾಟಕದ ವ್ಯವಸಾಯದ ಬಗ್ಗೆ ಮಾಹಿತಿ
![Information about Agriculture in Karnataka in Kannada](https://i0.wp.com/kannadanotes.com/wp-content/uploads/2023/03/ಕರ್ನಾಟಕದ-ವ್ಯವಸಾಯದ-ಬಗ್ಗೆ-ಮಾಹಿತಿ.jpg?resize=275%2C183&ssl=1)
ಈ ಲೇಖನಿಯಲ್ಲಿ ಕರ್ನಾಟಕದ ವ್ಯವಸಾಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕರ್ನಾಟಕದ ವ್ಯವಸಾಯ :
- ಭೂಮಿಯನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದನ್ನು ವ್ಯವಸಾಯ ಎನ್ನುವರು.
- ಕರ್ನಾಟಕದಲ್ಲಿ ಶೇ.61.4 ಭಾಗದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯನ್ನು ಅವಲಂಬಿಸಿದ್ದಾರೆ.
- ಕರ್ನಾಟಕದ ಪುರಾತನ ಮೂಲ ವೃತ್ತಿಗಳಲ್ಲಿ ವ್ಯವಸಾಯವೂ ಒಂದು. ಇದು ಮುಖ್ಯ ಜೀವನಾಧಾರಿತ ವೃತ್ತಿ. ನಮ್ಮ ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದೆ.
ವ್ಯವಸಾಯದ ವಿಧಗಳು :
- ಕಾಲುವೆ, ಕೆರೆ, ಬಾವಿ, ಮೂಲಗಳಿಂದ ನೀರನ್ನು ಬಳಕೆ ಮಾಡಿ ಸಾಗುವಳಿ ಮಾಡುವ ಕೃಷಿ ಪದ್ದತಿಗೆ ನೀರಾವರಿ ಬೇಸಾಯ ಎನ್ನುವರು.
- ಮಳೆ ಆಶ್ರಿತ ಬೆಳೆಗಳ ಸಾಗುವಳಿಗೆ ಒಣ ಅಥವಾ ಶುಷ್ಕ ಬೇಸಾಯ ಎನ್ನುವರು.
- ವಿಶಾಲವಾದ ಸಾಗುವಳಿ ಭೂಮಿಯಲ್ಲಿ ಹಣ ಗಳಿಕೆಗಾಗಿ ಕೆಲವೇ ಬಹುವಾರ್ಷಿಕ ಬೆಳೆಗಳನ್ನು ಸಾಗುವಳಿ ಮಾಡುವುದೇ ನೆಡತೋಪು ಬೇಸಾಯ ಅಥವಾ ಪ್ಲಾಂಟೇಷನ್ ಎನ್ನುವರು. ಉದಾ :ಕಾಫಿ, ಚಹ, ರಬ್ಬರ್, ಕೋಕೋ.
- ಸ್ವದೇಶಿ ಉಪಯೋಗಕ್ಕಲ್ಲದೇ ವಿದೇಶೀ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡುಮಾಡುವ ಸಾಗುವಳಿಯೇ ವಾಣಿಜ್ಯ ಬೇಸಾಯ ಎನ್ನುವರು.
- ಮಾರಾಟಕ್ಕಲ್ಲದೇ ರೈತರ ಜೀವನೋಪಾಯಕ್ಕಾಗಿ ಬೆಳೆ ಬೆಳೆಯುವ ಕೃಷಿ ಪದ್ದತಿಗೆ ಜೀವನಾಧಾರ ಬೇಸಾಯ ಎನ್ನುವರು. ಇದು ಪುರಾತನ ಮಾದರಿ ಬೇಸಾಯವಾಗಿದೆ.
- ಬೆಲೆ ಬೆಳೆಯುವುದರ ಜೊತೆಯಲ್ಲೇ ಪಶುಸಂಗೋಪನೆ, ರೇಷ್ಮೆ ಕೃಷಿ, ಕುರಿ ಸಾಕಾಣಿಕೆ, ಕೋಳಿ ಸಾಗಾಣಿಕೆ, ಜೇನು ಸಾಗಾಣಿಕೆ, ಮೀನುಗಾರಿಕೆ ಮುಂತಾದ ಉಪ ಕಸುಬುಗಳನ್ನು ನಿರ್ವಹಿಸುವುದನ್ನು ಮಿಶ್ರ ಬೇಸಾಯ ಎನ್ನುವರು.
ಭತ್ತ :
- ಇದು ಪೊಯೆಸಿ ಹುಲ್ಲಿನ ವರ್ಗದ ಸಸ್ಯ
- ಇದರ ವೈಜ್ಞಾನಿಕ ಹೆಸರು – ಓರೈಸಾ ಸಟೈವಾ
- ಇದು ಉಷ್ಣವಲಯದ ಬೆಳೆಯಾಗಿದೆ. ಇದರ ಬೇಸಾಯಕ್ಕೆ ಹೆಚ್ಚು ಮಳೆ ಮತ್ತು ಉಷ್ಣಾಂಶ ಬೇಕಾಗಿರುತ್ತದೆ.
- ಸುಮಾರು ಶೇ.70 ಭಾಗದಷ್ಟು ಫಸಲನ್ನು ಜೂನ್ – ಆಗಸ್ಟ್ ತಿಂಗಳುಗಳಲ್ಲಿ ನಾಟಿ ಮಾಡಿ ನವೆಂಬರ್ – ಡಿಸೆಂಬರ್ ತಿಂಗಳಿನಲ್ಲಿ ಕಟಾವು ಮಾಡುವರು.
- ಇದನ್ನು ಹೈನು ಬೆಳೆ ಎನ್ನುವರು.
- ಬೇಸಿಗೆಯಲ್ಲೂ ನೀರಾವರಿ ಸೌಲಭ್ಯ ದೊರೆಯುವ ಪ್ರದೇಶಗಳಲ್ಲಿ ಭತ್ತ ಬೆಳೆಯುವರು. ಇದನ್ನು ಖಾರೀಫ್ ಬೆಳೆ ಎನ್ನುವರು.
- ಭತ್ತವನ್ನು ಮಲೆನಾಡು ಪ್ರದೇಶದಲ್ಲಿ ಚೆಲ್ಲುವ ವಿಧಾನಗಳಿಂದ ಬೆಳೆಯುವರು.
- ಭತ್ತವನ್ನುಉತ್ಪಾದನೆಯಲ್ಲಿ ರಾಯಚೂರು ಪ್ರಥಮ ಸ್ಥಾನದಲ್ಲಿದೆ. ನಂತರ ದಾವಣಗೆರೆ, ಮೈಸೂರು, ಶಿವಮೊಗ್ಗ, ಮಂಡ್ಯ, ಕೊಪ್ಪಳ, ಉತ್ತರಕನ್ನಡ ಜಿಲ್ಲೆಯಾಗಿದೆ.
- ಭತ್ತವು ನೀರಾವರಿಯಲ್ಲಿ ಬೆಳೆಯುವ ಉತ್ತಮ ಗುಣಮಟ್ಟ ಹಾಗೂ ಇಳುವರಿಯೂ ಹೆಚ್ಚಾಗಿರುವ ಬೆಳೆಯಾಗಿದೆ.
- ಭತ್ತ ಸಂಶೋಧನಾ ಕೇಂದ್ರವು ಓರಿಸ್ಸಾದ ಕಟಕನಲ್ಲಿದೆ.
ಜೋಳ :
- ಭತ್ತದ ನಂತರ ಜೋಳವು ಕರ್ನಾಟಕದ 2ನೇಯ ಸ್ಥಾನದ ಬೆಳೆಯಾಗಿದೆ.
- ಭಾರತದಲ್ಲಿ ಕರ್ನಾಟಕವು ಜೋಳದ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ.
- ಇದು ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರ ಬೆಳೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಜೋಳವನ್ನು ಜಾನುವಾರುಗಳ ಮೇವಿಗಾಗಿ ಬೆಳೆಯುವರು.
- ಇದು ಹುಲ್ಲಿನ ಜಾತಿಗೆ ಸೇರಿದ ಸಸ್ಯವರ್ಗ.
- ಇದು ಉಷ್ಣವಲಯದ ಬೆಳೆಯಾಗಿದ್ದು ಬೇಸಾಯಕ್ಕೆ ಸಾಧಾರಣ ಮಳೆ, ಒಣ ಹವೆ, ಕಪ್ಪು, ಕೆಂಪು ಮತ್ತು ಮೆಕ್ಕಲು ಮಿಶ್ರಿತ ಮಣ್ಣು ಇದ್ದರೆ ಸಾಕು.
- ಜೋಳವನ್ನು ಬಿತ್ತನೆ ಮಾಡುವ ವಿಧಾನದಿಂದ ಮಳೆ ಆಶ್ರಯದಲ್ಲಿ ಬೆಳೆಯುವರು.
- ಜೋಳದ ಉತ್ಪಾದನೆಯಲ್ಲಿ ವಿಜಯಪುರ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ.
ರಾಗಿ :
- ಇದು ಉತ್ತಮ ಪೋಷಕಾಂಶ ಹೊಂದಿರುವ ಆಹಾರದ ಬೆಳೆಯಾಗಿದೆ.
- ಇದರ ವೈಜ್ಞಾನಿಕ ಹೆಸರು – ಯೆಲಿಯುಸಿನ್ ಕೋರಾಕಾನ
- ಇದು ಹೆಚ್ಚು ಕಾಲ ಸಂಗ್ರಹಿಸಬಹುದಾದ ಧಾನ್ಯ
- ಇದು ಉಷ್ಣವಲಯದ ಬೆಳೆ. ಅಧಿಕ ಉಷ್ಣಾಂಶ ಸಾಧಾರಣ ಮಳೆ, ಕೆಂಪು ಮತ್ತು ಮೆಕ್ಕಲು ಮಿಶ್ರಿತ ಮಣ್ಣು ಇದಕ್ಕೆ ಯೋಗ್ಯವಾಗಿದೆ.
- ರಾಗಿ ಉತ್ಪಾದನೆಯಲ್ಲಿ ಕರ್ನಾಟಕವು ಭಾರತದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
- ರಾಗಿಯು ಹಳೆಯ ಮೈಸೂರು ಪ್ರಾಂತ್ಯದ ಸಾಂಪ್ರದಾಯಿಕ ಬೆಳೆಯಾಗಿದೆ.
- ಕರ್ನಾಟಕದಲ್ಲಿ ತುಮಕೂರು ಅತಿ ಹೆಚ್ಚು ರಾಗಿ ಉತ್ಪಾದಿಸುವ ಜಿಲ್ಲೆ. ಅನಂತರ ಸ್ಥಾನದಲ್ಲಿ ರಾಮನಗರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಾಗಿದೆ.
ಕಬ್ಬು :
- ಇದರ ವೈಜ್ಞಾನಿಕ ಹೆಸರು – ಸಖ್ಯಾರಮ್ ಅಫಿಸಿನೇರಮ್
- ಇದು ಉಷ್ಣವಲಯದ ಬೆಳೆಯಾಗಿದೆ.
- ಕರ್ನಾಟಕವು ಕಬ್ಬು ಉತ್ಪಾದನೆಯಲ್ಲಿ ಭಾರತದಲ್ಲಿ ನಾಲ್ಕನೆಯ ಸ್ಥಾನದಲ್ಲಿರುವ ರಾಜ್ಯ
- ಕಬ್ಬಿನ ಬೇಸಾಯಕ್ಕೆ ಮರಳು ಮಿಶ್ರಿತ ಮೆಕ್ಕಲು ಮಣ್ಣು, ಕೆಂಪು ಮಣ್ಣು ಉತ್ತಮವಾಗಿರುತ್ತದೆ.
- ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆಯಾಗುವ ಪ್ರದೇಶದಲ್ಲಿ ಬೆಳೆಯುವರು.
- ಇದು ಸಹ ಹುಲ್ಲಿನ ಜಾತಿಯ ಸಸ್ಯವಾಗಿದ್ದು. ಇದು ಸುಮಾರು 3 ಮೀಟರ್ ಎತ್ತರದವರೆಗೆ ಬೆಳೆಯುತ್ತದೆ.
- ಬೆಳಗಾವಿ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ಜಿಲ್ಲೆಯಾಗಿದೆ.
- ಸ್ವಾತಂತ್ರ್ಯ ಪೂರ್ವದಿಂದಲೂ ಕಬ್ಬು ಬೆಳೆಯಲು ಮಂಡ್ಯದ ಜಿಲ್ಲೆ ಹೆಸರುವಾಸಿಯಾಗಿದೆ.
ಹತ್ತಿ :
- ನಾರಿನ ಬೆಳೆಯಾಗಿದೆ. ಹತ್ತಿಯು, ಬಟ್ಟೆ ಕೈಗಾರಿಕೆಯ ಕಚ್ಚಾ ವಸ್ತುವಾಗಿದೆ.
- ಇದು ಉಷ್ಣವಲಯ ಮತ್ತು ಉಪ ಉಷ್ಣವಲಯಗಳ ವಾಣಿಜ್ಯ ಬೆಳೆಯಾಗಿದೆ.
- ಸಾಧಾರಣ ಮಳೆ, ಹೆಚ್ಚು ಉಷ್ಣಾಂಶ ಹಾಗೂ ಕಪ್ಪು ಮಣ್ಣು ಈ ಬೆಳೆಗೆ ಸೂಕ್ತ.
- ಉದ್ದ, ಮಧ್ಯಮ, ತುಂಡು ಎಳೆಯ ಹತ್ತಿಯನ್ನು ಕಾಣಬಹುದಾಗಿದೆ.
- ಕರ್ನಾಟಕದಲ್ಲಿ ಹೆಚ್ಚಾಗಿ ಮಧ್ಯಮ ಮತ್ತು ತುಂಡು ಎಳೆಯ ಹತ್ತಿಯನ್ನು ಬೆಳೆಯುವರು.
- ಹತ್ತಿಯನ್ನು ಕರ್ನಾಟಕದಲ್ಲಿ ಆಗಸ್ಟ್- ಸೆಪ್ಟೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡುವರು. ಇದನ್ನು ಮಳೆ ಆಶ್ರಯದಲ್ಲಿ ಬೆಳೆಯುವುದೇ ಹೆಚ್ಚು.
- ಹಾವೇರಿ ಜಿಲ್ಲೆ ಹತ್ತಿ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
ತಂಬಾಕು :
- ಇದು ನಿಕೋಷಿಯಾನ್ ವರ್ಗಕ್ಕೆ ಸೇರಿದ ಸಸ್ಯವಾಗಿದೆ.
- ಇದರಲ್ಲಿ ನಿಕೋಟಿನ್ ಎಂಬ ಮಾದಕ ವಸ್ತುವಿದೆ.
- ಪೋರ್ಚುಗೀಸರು 17ನೇ ಶತಮಾನದಲ್ಲಿ ತಂಬಾಕನ್ನು ಭಾರತಕ್ಕೆ ಪರಿಚಯಿಸಿದರು.
- ಸಾಧಾರಣ ಮಳೆ ಮತ್ತು ಹೆಚ್ಚು ಉಷ್ಣಾಂಶವುಳ್ಳ ಮರಳು ಮಿಶ್ರಿತ ಮಣ್ಣಿನ ಪ್ರದೇಶಗಳಲ್ಲಿ ಇದನ್ನು ಬೆಳೆಯುವರು.
- ವರ್ಜಿನಿಯಾ ತಂಬಾಕು ಉತ್ತಮ ದರ್ಜೆಯದ್ದಾಗಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆಗಳಿಸಿದೆ.
- ಮೈಸೂರು ಜಿಲ್ಲೆಯು ತಂಬಾಕು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
- ಬೆಳಗಾವಿ ಜಿಲ್ಲೆಯ ನಿಪ್ಪಾಣಿಯು ದೇಶದಲ್ಲಿ ಬೀಡಿ ತಯಾರಿಕಾ ತಂಬಾಕು ಮಾರಿಕಟ್ಟೆಗೆ ಅತ್ಯಂತ ಪ್ರಸಿದ್ದವಾಗಿದೆ.
- ಕರ್ನಾಟಕದಲ್ಲಿ ಬೆಳೆಯುವ ತಂಬಾಕು ವಿಶ್ವದರ್ಜೆಯದಾಗಿದ್ದು, ಉತ್ಪಾದನೆಯ ಬಹುಪಾಲು ರಫ್ತಾಗುವುದು.
- ತಂಬಾಕು ಸಂಶೋಧನಾ ಕೇಂದ್ರ – ರಾಜಮಂಡ್ರಿ(ಆಂದ್ರಪ್ರದೇಶ
ಕಾಫಿ :
- ಕಾಫಿಯ ವೈಜ್ಞಾನಿಕ ಹೆಸರು – ರುಬಿಯೇಸಿ ಕೇಪಿನ್
- ಕಾಫಿಯು ಕರ್ನಾಟಕದ ಪ್ರಸಿದ್ದ ನೆಡುತೋಟದ ಪಾನೀಯ ಬೆಳೆ
- ಕರ್ನಾಟಕವು ಭಾರತದಲ್ಲೇ ಕಾಫಿಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
- ಕ್ರಿ.ಶ.1670 ರ ಸುಮಾರಿಗೆ ಬಾಬಬುಡನ್ ಎಂಬ ಮುಸ್ಲಿಂ ಸಂತನು ಚಿಕ್ಕಮಂಗಳೂರಿನ ಬೆಟ್ಟಗಳ ಸಾಲಿನಲ್ಲಿ ಕಾಫಿ ಸಸಿಗಳನ್ನು ಬೆಳೆಸಿದನು. ಆದ್ದರಿಂದ ಇದನ್ನು ಬಾಬಾಬುಡನಗಿರಿ ಎನ್ನುವರು. ಆದರೆ ಇದರ ಕ್ರಮಬದ್ದವಾದ ಬೇಸಾಯವು 1826 ರಲ್ಲಿ ಪ್ರಾರಂಭವಾಯಿತು.
- ಕರ್ನಾಟಕವು ಅರೆಬಿಕಾ ಹಾಗೂ ರುಬೆಸ್ಟಾ ಎಂಬ ಎರಡು ಪ್ರಭೇದದ ಕಾಫಿಯನ್ನು ಉತ್ಪಾದಿಸುತ್ತಿದೆ.
- ಕೊಡಗು ಜಿಲ್ಲೆಯು ಕಾಫಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
- ಕರ್ನಾಟಟಕದಲ್ಲಿ ಬೆಲೆಯುವ ಕಾಫಿ ಅತ್ಯುತ್ತಮವಾಗಿದ್ದು. ರುಚಿ ಮತ್ತು ಸ್ವಾದಕ್ಕೆ ಹೆಸರುವಾಸಿಯಾಗಿದೆ. ದೇಶ ವಿದೇಶಗಳಲ್ಲಿ ಈ ಕಾಫಿಯು ಉತ್ತಮವಾದ ಮಾರುಕಟ್ಟೆಯನ್ನು ಹೊಂದಿದೆ.
FAQ :
ತಂಬಾಕಿನಲ್ಲಿ ಯಾವ ಮಾದಕ ವಸ್ತುವಿದೆ?
ನಿಕೋಟಿನ್
ಭತ್ತದ ವೈಜ್ಞಾನಿಕ ಹೆಸರೇನು?
ಓರೈಸಾ ಸಟೈವಾ
ಇತರೆ ವಿಷಯಗಳು :
ಕರ್ನಾಟಿಕ್ ಯುದ್ದಗಳ ಬಗ್ಗೆ ಮಾಹಿತಿ