ಕರ್ನಾಟಕದ ಪ್ರಸಿದ್ದ ಜಲಾಶಯಗಳ ಬಗ್ಗೆ ಮಾಹಿತಿ Information About Famous Reservoirs of Karnataka karnatakada prasidda jalashayagalu in kannada
ಕರ್ನಾಟಕದ ಪ್ರಸಿದ್ದ ಜಲಾಶಯಗಳ ಬಗ್ಗೆ ಮಾಹಿತಿ
![ಕರ್ನಾಟಕದ ಪ್ರಸಿದ್ದ ಜಲಾಶಯಗಳ ಬಗ್ಗೆ ಮಾಹಿತಿ | Information About Famous Reservoirs of Karnataka in Kannada](https://i0.wp.com/kannadanotes.com/wp-content/uploads/2023/01/Information-About-Famous-Reservoirs-of-Karnataka.jpg?resize=286%2C190&ssl=1)
ಈ ಲೇಖನಿಯಲ್ಲಿ ಜಲಾಶಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಕೃಷ್ಣರಾಜಸಾಗರ :
ಈ ಜಲಾಶಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯವು ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು ೧.೯೫ ಲಕ್ಷ ಹೆಕ್ಟರ್ ಭೂಮಿಗೆ ನೀರು ಒದಗಿಸುತ್ತದೆ.
ಕೃಷ್ಣಾ ಮೇಲ್ದಂಡೆ ಯೋಜನೆ :
ಈ ಯೋಜನೆಯಡಿಯಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ವಿಜಾಪುರ ಜಿಲ್ಲೆಯ ನಾರಾಯಣಪುರಗಳಲ್ಲಿ ಜಲಾಶಯಗಳನ್ನು ನಿರ್ಮಿಸಲಾಗಿದ್ದು ಬರಗಾಲ ಪೀಡಿತ ವಿಜಾಪುರ, ಕಲಬುರ್ಗಿ, ಯಾದಗಿರಿ, ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ೬.೨೨ ಲಕ್ಷ ಹೆಕ್ಟರ್ ಭೂಮಿಗೆ ನೀರೊದಗಿಸುವ ಗುರಿ ಹೊಂದಲಾಗಿದೆ.
ಮಲಪ್ರಭಾ ಯೋಜನೆ :
ಮಲಪ್ರಭಾ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಳಿ ನವಿಲುತೀರ್ಥ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಯೋಜನೆಯಿಂದ ೨,೨೦,೦೨೮ ಹೆಕ್ಟರ್ ಭೂಮಿಗೆ ನೀರೊದಗಿಸುವ ಗುರಿ ಇದೆ.
ಭದ್ರಾ ಜಲಾಶಯ ಯೋಜನೆ :
ಈ ಜಲಾಶಯವನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದ್ದು. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಬಳ್ಳಾರಿ ಜಿಲ್ಲೆಗಳ ೧,೦೫,೦೦೦ ಹೆಕ್ಟರ್ ಭೂಮಿಗೆ ನೀರಾವರಿ ನೀಡಲಾಗುತ್ತದೆ.
ತುಂಗಾಭದ್ರ ಜಲಾಶಯ ಯೋಜನೆ :
ಈ ಜಲಶಯವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲ್ಲಾಪುರದ ಬಳಿ ಕರ್ನಾಟಕ ಮತ್ತು ಆಂದ್ರಪ್ರದೇಶ ರಾಜ್ಯಗಳ ಜಂಟಿ ಯೋಜನೆಯಾಗಿ ತುಂಗಾಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಯೋಜನೆಯು ೧೯೪೫ ರಲ್ಲಿ ಪ್ರಾರಂಭವಾಯಿತು. ಈ ಜಲಾಶಯದಿಂದ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು ೩, ೬೨,೭೯೫ ಹೆಕ್ಟರ್ ಭೂಮಿಗೆ ನೀರೊದಗಿಸುವ ಅವಕಾಶವಿದೆ.
ತುಂಗಾ ಮೇಲ್ದಂಡೆ ಯೋಜನೆ :
ಈ ಯೋಜನೆಯಡಿ ಈಗ ಶಿವಮೊಗ್ಗ ಬಳಿ ಇರುವ ತುಂಗಾ ಆಣೆಕಟ್ಟಿಗೆ ಹೊಸ ರೂಪ ನೀಡಿ ಶಿವಮೊಗ್ಗ, ಚಿತ್ರದುರ್ಗ, ಧಾರವಾಡ ಜಿಲ್ಲೆಗಳ ಸುಮಾರು ೯೪,೭೦೦ ಹೆಕ್ಟರ್ ಭೂಮಿಗೆ ನೀರೊದಗಿಸುವ ಗುರಿಯನ್ನು ಹೊಂದಿದೆ.
ಹಾರಂಗಿ ಯೋಜನೆಗಳು :
ಈ ಯೋಜನೆಯಂತೆ ಕೊಡಗು ಜಿಲ್ಲೆಯ, ಸೋಮವಾರ ಪೇಟೆ ತಾಲೂಕಿನ ಹುಡ್ಗೂರ ಗ್ರಾಮದ ಬಳಿ ಹಾರಂಗಿ ನದಿಗೆ ಅಡ್ಡಾಗಿ ಜಲಾಶಯ ನಿರ್ಮಿಸಿ ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳ ಸುಮಾರು ೫೩, ೩೯೧ ಹೆಕ್ಟರ್ ಭೂಮಿಗೆ ನೀರೋದಗಿಸಲಾಗುತ್ತದೆ.
ಬೆಣ್ಣೆತೋರ ಯೋಜನೆ :
ಈ ಯೋಜನೆಯಂತೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೆರೂರು ಗ್ರಾಮದ ಬಳಿ ಬೆಣ್ಣೆತೊರ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಲಾಗಿದ್ದು. ಕಲಬುರಗಿ ಜಿಲ್ಲೆಯ ೨೦,೨೩೪ ಹೆಕ್ಟರ್ ಜಮೀನಿಗೆ ನೀರಾವರಿ ಕಲ್ಪಿಸಲಾಗಿದೆ.
ಕಾರಂಜಾ ಯೋಜನೆ :
ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಬಳಿ ಮಾಂಜ್ರಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಲಾಗಿದ್ದು, ಯೋಜನೆಯಡಿ ನೀರಾವರಿ ಒದಗಿಸಲು ಯೋಜಿಸಿರುವ ಜಮೀನು ೩೫,೬೧೪ ಹೆಕ್ಟರ್ ಆಗಿದೆ.
FAQ
ಹಾರಂಗಿ ಯೋಜನೆಯು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ?
ಹಾರಂಗಿ
ಕೃಷ್ಣಾರಾಜಸಾಗರ ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ?
ಕಾವೇರಿ
ಇತರೆ ವಿಷಯಗಳು :
ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ