ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಮಾಹಿತಿ Information about India’s biodiversity hotspots Bharathada Jeeva Vaividhyatheya tivra Nelegala bagge Mahithi in Kannada
ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಮಾಹಿತಿ
![Information about India's biodiversity hotspots in Kannada](https://i0.wp.com/kannadanotes.com/wp-content/uploads/2023/02/ಭಾರತದ-ಜೀವ-ವೈವಿದ್ಯತೆಯ-ತೀವ್ರ-ನೆಲೆಗಳ-ಬಗ್ಗೆ-ಮಾಹಿತಿ.jpg?resize=304%2C202&ssl=1)
ಈ ಲೇಖನಿಯಲ್ಲಿ ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ ಪೊಸತ ನಲ್ಲಿ ನೀಡಲಾಗಿದೆ.
ಭಾರತದ ಜೀವ ವೈವಿದ್ಯತೆ :
ಭಾರತದ ಬಹು ಭಾಗವು ಇಂಡೋಮಲಯನ್ ಎಕೊಜೋನ್ ವಲಯದಲ್ಲಿ ಬರುವುದು. ಹಿಮಾಲಯದ ಮೇಲ್ಬಾಗವು “ಪೆರಿ ಆರ್ಕಟಿಕ್ ಎಕೊಜೋನ್” ವಲಯದಲ್ಲಿ ಬರುವುದು. ಭಾರತದ ಜೀವವೈವಿಧ್ಯತೆಯಲ್ಲಿ 76% ಸಸ್ತನಿಗಳು, 12.6% ಪಕ್ಷಿಗಳು, 62% ಸರೀಸೃಪಗಳು, 4.4% ಉಭಯವಾಸಿಗಳು, 11.7% ಮೀನುಗಳು, 06% ಹೂಬಿಡುವ ಸಸ್ಯಗಳು ಸೇರಿವೆ.
ಭಾರತದ ಜೀವ ವೈವಿಧ್ಯದ ತೀವ್ರ ನೆಲೆಗಳೆಂದರೆ :
- ಪೂರ್ವ ಹಿಮಾಲಯ ಪ್ರದೇಶ
- ಪಶ್ಚಿಮ ಘಟ್ಟಗಳು
ಪೂರ್ವ ಹಿಮಾಲಯ ಪ್ರದೇಶ :
- ವಿಶಿಷ್ಟ ಹೂ ತಳಿಗಳ ಪ್ರದೇಶವಾಗಿದ್ದು, 3000ಕಿ.ಮೀ.ಪ್ರದೇಶವನ್ನು ಆವರಿಸಿಕೊಂಡಿದೆ.
- ಈ ಪ್ರದೇಶವು ಉತ್ತರ ಪಾಕಿಸ್ತಾನ, ನೇಪಾಳ, ಭೂತಾನ್, ಭಾರತದ ಈಶಾನ್ಯ ಹಾಗೂ ವಾಯುವ್ಯ ಭಾಗದ ರಾಜ್ಯಗಳು ಹಾಗೂ ಚೀನಾ ದೇಶದ ಯುನಾನ್ ಪ್ರಾಂತ್ಯವನ್ನೊಳಗೊಂಡಿದೆ.
- ಹಿಮಾಲಯದ ತೀವ್ರ ನೆಲೆಯಲ್ಲಿ 10,000 ವೆಂದು ಅಂದಾಜು ಮಾಡಲಾಗಿದ್ದು, ಸಸ್ಯ ಪ್ರಭೇದಗಳಲ್ಲಿ 3160 ಸಸ್ಯ ಪ್ರಬೇಧಗಳು ಸ್ಥಳೀಯ ಪ್ರಬೇಧಗಳಾಗಿವೆ.
- ದಾಖಲಿಸಲಾದ 175 ಸರೀಸೃಪಗಳ ವಿಧಗಳ ಪೈಕಿ 50 ಸ್ಥಳೀಯ ಸರೀಸೃಪಗಳಾಗಿವೆ.
- 150 ಉಭಯವಾಸಿಗಳಾದ ವಿಧಗಳಲ್ಲಿ 40 ಸ್ಥಳೀಯ ಉಭಯ ವಾಸಿಗಳಾಗಿವೆ.
- 270 ಮೀನು ಪ್ರಬೇಧಗಳನ್ನು ಹೊಂದಿವೆ, ಅವುಗಳನ್ನು 30 ಸ್ಥಳೀಯ ಪ್ರಬೇಧಗಳಾಗಿವೆ.
ಪಶ್ಚಿಮ ಘಟ್ಟಗಳು :
- ಭಾರತದ 2ನೇ ಮಹಾ ಜೀವವೈವಿಧ್ಯತೆಯ ತೀವ್ರ ನೆಲೆಯಾಗಿದೆ.
- ಇದು ಸುಮಾರು 6 ರಾಜ್ಯಗಳನ್ನು ಪಸರಿಸಿದ್ದು, ಈ ಪರ್ವತ ಶ್ರೇಣಿಗಳು 60,000 ಕೀ.ಮೀ. ಪ್ರದೇಶವನ್ನು ಆವರಿಸಿಕೊಂಡಿದೆ.
- ದೇಶದಲ್ಲಿರುವ 15,000 ಹೂ ಬಿಡುವ ಸಸ್ಯ ಪ್ರಬೇಧಗಳಲ್ಲಿ 7400 ಪ್ರಬೇಧಗಳು ಇಲ್ಲಿ ಕಂಡು ಬರುತ್ತವೆ.
- ಅಲ್ಲದೆ 139 ಸಸ್ತನಿಗಳು, 508 ಪಕ್ಷಿ ಪ್ರಬೇಧಗಳು ಹಾಗೂ 179 ಉಭಯವಾಸಿ ಜೀವಿ ಪ್ರಬೇಧಗಳು ಕಂಡು ಬರುತ್ತವೆ.
- ಕನಿಷ್ಠ ಸ್ಥಳೀಯವಲ್ಲದ ಸ್ವಾಭಾವಿಕವಲ್ಲದ ಸ್ವಾಭಾವಿಕಗೊಳಿಸಿದ ಹಾಗೂ 1438 ಅಲಂಕಾರಿಕ ಸಸ್ಯಗಳಿವೆ.
ಸಸ್ಯಶಾಸ್ತ್ರೋದ್ಯಾನ :
- ಸಸ್ಯಶಾಸ್ತ್ರೋದ್ಯಾನಗಳು ವ್ಯಾಪಾರ ಬಗೆಯ ಸಸ್ಯ ಪ್ರಬೇಧಗಲ ಸಂಗ್ರಹ, ಕೃಷಿ ಹಾಗೂ ಪ್ರದರ್ಶನಕ್ಕೆ ಮೀಸಲಾಗಿರುವ ಸ್ಥಳವಾಗಿರುತ್ತದೆ.
- ಈ ಉದ್ಯಾನವನಗಳು ಹಸಿರು ಮನೆಯ ಗಾಜಿನ ಅಡಿಯಲ್ಲಿ ಹಾಗೂ ಕನರ್ವೇಟರೀಸ್ಗಳಲ್ಲಿ ಬೆಳೆದ ಜೀವಂತ ಸಸ್ಯಗಳನ್ನು ಒಳಗೊಂಡಿರುತ್ತದೆ.
ಅರಣ್ಯ ನೀತಿ :
- ಭಾರತವು ಅರಣ್ಯ ಸಂರಕ್ಷಣೆಗೆ ಹಾಗೂ ಯೋಜಿತವಾದ ಬಳಕೆಗೆ ಪ್ರತ್ಯೇಕ ಅರಣ್ಯ ನೀತಿಯನ್ನು ರೂಪಿಸಿದ ಪ್ರಪಂಚದ ಮೊದಲ ದೇಶ.
- 1864 ರಲ್ಲಿಯೇ ಅರಣ್ಯ ಇಲಾಖೆಯನ್ನು ರೂಪಿಸಿ ಮೊದಲ ಅರಣ್ಯ ನೀತಿಯನ್ನು 1865 ರಲ್ಲಿ ಜಾರಿಗೊಳಿಸತ್ತು.
- ನಂತರ ಈ ನೀತಿಯನ್ನು 1952 ಹಾಗೂ 1988 ರಲ್ಲಿ ಪರಿಷ್ಕರಿಸಲಾಯಿತು.
ಅರಣ್ಯ ನೀತೀಯ ಮೂಲ ಗುರಿಗಳು :
- ಅರಣ್ಯಗಳ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವುದು.
- ಅರಣ್ಯಗಳನ್ನು ಸಂರಕ್ಷಿಸಿ ಪರಿಸರ ಸಮತೋಲನ ಕಾಪಾಡುವುದು.
- ರಾಷ್ಟ್ರೀಯ ಅಬಿವೃದ್ದಿಗಾಗಿ ಅರಣ್ಯ ಸಂಪನ್ಮೂಲ ಹೆಚ್ಚಿಸುವುದು.
- ನದಿ ಸರೋವರ ಮತ್ತು ಜಲಾನಯನ ಪ್ರದೇಶದಲ್ಲಿ ಭೂಸವೆತ ತಡೆಯುವುದು.
- ಅರಣ್ಯ ಸಂಪನ್ಮೂಲಗಳ ಸದ್ಬಳಕೆಗೆ ಕ್ರಮ ಕೈಗೊಳ್ಳುವುದು.
- ಗಿಡಮರ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು.
- ನೆಲದಡಿಯ ಅಂತರ್ಜಲ ಹಿಗ್ಗದಂತೆ ಎಲ್ಲ ಪ್ರದೇಶದಲ್ಲೂ ಗಿಡಮರ ಬೆಳೆಸುವುದು.
- ಭೂಮಿಯ ಸಾರವನ್ನು ಉಳಿಸಿಕೊಳ್ಳಲು ಅರಣ್ತ ಪ್ರದೇಶವನ್ನು ಎಚ್ಚರದಿಂದ ಕಾಪಾಡುವುದು.
- ಗ್ರಾಮೀಣ ಪ್ರದೇಶಗಳ ಅವಶ್ಯಕತೆಗಳಾದ ಇಂಧನ, ಮೇವು, ಕಚ್ಚಾವಸ್ತುಗಳ ಪೂರೈಕೆಗಾಗಿ ಅರಣ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಮತ್ತೆ ವೃದ್ದಿಸಿಕೊಳ್ಳುವ ಕಾರ್ಯಕ್ರಮ ಕೈಗೊಳ್ಳುವುದು.
FAQ :
ಅರಣ್ಯ ನೀತಿ ಯಾವಾಗ ಜಾರಿಗೆ ಬಂತು?
1988
ಭಾರತದ ಜೀವ ವೈವಿಧ್ಯದ ತೀವ್ರ ನೆಲೆಗಳನ್ನು ತಿಳಿಸಿ?
ಪೂರ್ವ ಹಿಮಾಲಯ ಪ್ರದೇಶ
ಪಶ್ಚಿಮ ಘಟ್ಟಗಳು
ಇತರೆ ವಿಷಯಗಳು :