ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information about mineral resources of Karnataka in Kannada

ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ Information about mineral resources of Karnataka Karnatakada Kanija Sampanmulagala bagge Mahithi in Kannada

ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ

Information about mineral resources of Karnataka in Kannada
ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಕದ ಖನಿಜ ಸಂಪನ್ಮೂಲಗಳು :

ಒಂದು ದೇಶ, ರಾಜ್ಯ ಅಥವಾ ಪ್ರದೇಶವು ಅರ್ಥಿಕವಾಗಿ ಮುಂದುವರೆಯಲು ಅಲ್ಲಿ ಸಿಗುವ ಅಪಾರವಾದ ಖನಿಜ ಸಂಪನ್ಮೂಲಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕರ್ನಾಟಕ ರಾಜ್ಯವು ವಿವಿಧ ರೀತಿಯ ಖನಿಜ ಸಂಪತ್ತನ್ನು ಹೊಂದಿದೆ. ಅವುಗಳಲ್ಲಿ ಕಬ್ಬಿಣದ ಅದಿರು, ಚಿನ್ನ, ಮ್ಯಾಂಗನೀಸ್‌, ಸುಣ್ಣಕಲ್ಲು, ತಾಮ್ರ, ಬಾಕ್ಸೈಟ್‌, ಕ್ರೋಮೈಟ್‌, ಕಲ್ನಾರು, ಅಬ್ರಕ ಮತ್ತು ಗ್ರಾನೈಟ್‌ ಪ್ರಮುಖವಾದವು.

ಕಬ್ಬಿಣದ ಅದಿರು :

  • ಇದು ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಕಚ್ಛಾ ವಸ್ತುವಾಗಿದೆ.
  • ಕರ್ನಾಟಕ ಉತ್ತಮ ದರ್ಜೆಯ ಮ್ಯಾಗ್ನಟೈಟ್‌ ಮತ್ತು ಹೆಮಟೈಟ್‌ ವರ್ಗದ ಅಪಾರವಾದ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿದೆ.
  • ಭಾರತದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಕರ್ನಾಟಕವು 2ನೇ ಸ್ಥಾನ ಹೊಂದಿದೆ. ರಾಜ್ಯದಲ್ಲಿ 75 ಕಬ್ಬಿಣದ ಅದಿರಿನ ಗಣಿಗಳಿವೆ.
  • ನಮ್ಮ ರಾಜ್ಯ ಉತ್ಪಾದಿಸುವ ಕಬ್ಬಿಣದ ಅದಿರಿನಲ್ಲಿ ಶ್ರೇಷ್ಠ ದರ್ಜೆಯ ಮ್ಯಾಗ್ನಟೈಟ್‌ ಪಾಲು ಶೇ.63 ಭಾಗದಷ್ಟಿದೆ.
  • ಕರ್ನಾಟಕದ ಬಳ್ಳಾರಿಯು ಕಬ್ಬಿಣ ನಿಕ್ಷೇಪದಲ್ಲಿ ಮೊದಲನೆ ಸ್ಥಾನದಲ್ಲಿದೆ.
  • ಜೀವೈವಿದ್ಯತೆಯನ್ನು ಕಾಪಾಡಲು ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯವು ರಾಷ್ಟ್ರೀಯ ಉದ್ಯಾನವಿರುವ ಕುದುರೆ ಮುಖದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ತೀರ್ಪು ನೀಡಿದೆ.

ಹಂಚಿಕೆ :

ಕರ್ನಾಟಕದ ಕಬ್ಬಿಣದ ಅದಿರಿನ ಹಂಚಿಕೆ ಅಧಿಕವಾಗಿ ಬಳ್ಳಾರಿ, ಚಿಕ್ಕಮಗಳೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಬಳ್ಳಾರಿ ಜಿಲ್ಲೆಯು ಅಪಾರವಾದ ನಿಕ್ಷೇಪವನ್ನು ಹೊಂದಿದ್ದು, ಪ್ರಥಮ ಸ್ಥಾನದಲ್ಲಿದೆ. ಅದು ಹೊಸಪೇಟೆ ಮತ್ತು ಸಂಡೂರು ಪ್ರದೇಶಗಳಲ್ಲಿ ಕಂಡುಬರುತ್ತದೆ. ದೋಣಿಮಲೈ, ವಿಭೂತಿಗುಡ್ಡ, ಬೆಳಗಾಳ, ಕುಮಾರಸ್ವಾಮಿ ಬೆಟ್ಟಗಳು, ತಿಮ್ಮಪ್ಪನ ಗುಡಿ, ದೇವಾದ್ರಿ ಶ್ರೇಣಿ, ರಾಮದುರ್ಗ ಬೆಟ್ಟಗಳಲ್ಲಿ ಕಬ್ಬಿಣದ ಅದಿರನ್ನು ಉತ್ಪಾದಿಸಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಬಾಬಾಬುಡನಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಗಂಗಾಮೂಲ, ಕಲ್ಹತ್ತಗಿರಿ, ಜೇನುಸುರಿ ಗುಡ್ಡಗಳಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ. ಜೀವವೈವಿಧ್ಯತೆಯನ್ನು ಕಾಪಾಡಲು ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯವು ರಾಷ್ಟ್ರೀಯ ಉದ್ಯಾನವಿರುವ ಕುದುರೆಮುಖದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ತೀರ್ಪು ನೀಡಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಸಾಸಲು, ಬಾಗಲಕೋಟೆಯ ಅಮೀನಗಡ, ತುಮಕೂರು ಜಿಲ್ಲೆಯ ಹುಳಿಯಾರು, ಚಿಕ್ಕನಾಯಕನಹಳ್ಳಿ, ಶಿವಮೊಗ್ಗ ಜಿಲ್ಲೆಯ ಕುಂಸಿ, ಶಂಕರಗುಡ್ಡ, ಸಿದ್ದರಹಳ್ಳಿ ಮುಂತಾದ ಕಡೆಗಳಲ್ಲಿಯೂ ಕಬ್ಬಿಣದ ಅದಿರಿನ ನಿಕ್ಷೇಪಗಳಿವೆ.

ಮ್ಯಾಂಗನೀಸ್‌ :

  • ಈ ಅದಿರು ಮುಖ್ಯವಾಗಿ ಪದರುಶಿಲೆ ಮತ್ತು ರೂಪಾಂತರ ಶಿಲೆಗಳಲ್ಲಿ ಆಕ್ಸೈಡ್‌ ರೂಪದಲ್ಲಿ ದೊರೆಯುತ್ತದೆ.
  • ಇದನ್ನು ಮಿಶ್ರಲೋಹವಾಗಿ ಉಕ್ಕಿನ ತಯಾರಿಕೆಯಲ್ಲಿ ಕಾಠಿಣ್ಯತೆಯನ್ನು ಹೆಚ್ಚಿಸಲು ಬಳಸುವರು. ಜೊತೆಗೆ ರಾಸಾಯನಿಕ, ವಿದ್ಯುತ್‌ ಕೈಗಾರಿಕೆ, ರಾಸಾಯನಿಕ ಗೊಬ್ಬರ. ಕ್ಯಾಲಿಕೋ ಪ್ರಿಟಿಂಗ್‌ ಹಾಗೂ ಬಣ್ಣ ತಯಾರಿಕೆಯಲ್ಲಿಯೂ ಬಳಸುವರು.
  • ಆದ್ದರಿಂದ ಇದನ್ನು ಬಹು ಉಪಯೋಗಿ ಖನಿಜ ಎನ್ನುವರು.
  • ದೇಶದ ಒಟ್ಟು ನಿಕ್ಷೇಪದಲ್ಲಿ ಶೇ.27 ಭಾಗ ಕರ್ನಾಟಕದಲ್ಲಿದೆ.
  • ಮ್ಯಾಂಗನೀಸ್‌ ಉತ್ಪಾದನೆಯಲ್ಲಿ ಓಡಿಸ್ಸಾ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 2ನೇ ಸ್ಥಾನ ಹೊಂದಿದೆ.
  • ಕರ್ನಾಟಕದಲ್ಲಿನ ಬಳ್ಳಾರಿ ಜಿಲ್ಲೆಯ ಸಂಡೂರು ಪ್ರಮುಖ ಮ್ಯಾಂಗನೀಸ್‌ ಉತ್ಪಾದಿಸುವ ಪ್ರದೇಶವಾಗಿದೆ. ಇಲ್ಲಿ ರಾಜ್ಯದ 90% ಮ್ಯಾಂಗನೀಸ್‌ ಉತ್ಪಾದಿಸಲಾಗುತ್ತದೆ.

ಹಂಚಿಕೆ :

ಕರ್ನಾಟಕದಲ್ಲಿ ಮ್ಯಾಂಗನೀಸ್‌ ಅದಿರಿನ ನಿಕ್ಷೇಪ ಹೇರಳವಾಗಿದ್ದು, ದೇಶದ ಒಟ್ಟು ನಿಕ್ಷೇಪದಲ್ಲಿ 27% ಭಾಗದಷ್ಟಿದೆ. ಮ್ಯಾಂಗನೀಸ್‌ ಉತ್ಪಾದನೆ ಒಡಿಶಾದ ನಂತರ ಕರ್ನಾಟಕವು 2ನೇ ಸ್ಥಾನದಲ್ಲಿದೆ. ರಾಜ್ಯದ ಮ್ಯಾಂಗನೀಸ್‌ ಹಂಚಿಕೆಯು ಕಬ್ಬಿಣದ ಅದಿರಿನ ಪ್ರದೇಶಗಳಲ್ಲೇ ಕಂಡುಬರುತ್ತದೆ. ಬಳ್ಳಾರಿ ಜಿಲ್ಲೆಯ ಸಂಡೂರು ಪ್ರಮುಖ ಮ್ಯಾಂಗನೀಸ್‌ ಉತ್ಪಾದಿಸುವ ಪ್ರದೇಶವಾಗಿದೆ. ಇಲ್ಲಿ ರಾಜ್ಯದ 90% ಮ್ಯಾಂಗನೀಸ್ ಉತ್ಪಾದಿಸಲಾಗುತ್ತದೆ. ಇತರೆ ಪ್ರಮುಖ ಮ್ಯಾಂಗನೀಸ್‌ ಗಣಿ ಕೇಂದ್ರಗಳೆಂದರೆ ಶಿವಮೊಗ್ಗ ಜಿಲ್ಲೆಯ ಕುಂಸಿ, ಶಂಕರಗುಡ್ಡ, ಹೊಸಹಳ್ಳಿ, ಚಿತ್ರದುರ್ಗ ಜಿಲ್ಲೆಯ ಸಾದರಹಳ್ಳಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕು, ಸೂಪ, ಲೋಂಡ, ಉಸ್ಕಾಂಡ ಹಾಗೂ ಧಾರವಾಡ, ವಿಜಯಪುರ, ಚಿಕ್ಕಮಗಳೂರು ಜಿಲ್ಲೆಗಳು. ರಾಜ್ಯದ ಮ್ಯಾಂಗನೀಸ್‌ ಉತ್ಪಾದನೆಯ ಬಹುಪಾಲು ಜಪಾನ್‌,ಚೀನಾ ಮುಂತಾದ ರಾಷ್ಟ್ರಗಳಿಗೆ ರಫ್ತಾಗುವುದು.

ಬಾಕ್ಸೈಟ್‌ :

  • ಇದನ್ನು ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸಲು ಅಧಿಕವಾಗಿ ಬಳಸುವರು.
  • ಜೊತೆಗೆ ಸಿಮೆಂಟ್‌, ಉಕ್ಕು, ವಿದ್ಯುತ್‌ ತಂತಿಗಳ ತಯಾರಿಕೆಯಲ್ಲಿ ಬಳಸುವರು.
  • ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯ ಪ್ರಮುಖ ಬಾಕ್ಸೈಟ್‌ ಉತ್ಪಾದಿಸುವ ಜಿಲ್ಲೆಯಾಗಿದೆ. ಇಲ್ಲಿನ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಬಾಕ್ಸೈಟ್‌ ಗಣಿಗಳಿವೆ.
  • ಈ ಅದಿರನ್ನು ಬೆಳಗಾವಿಯ ಇಂಡಿಯನ್‌ ಅಲ್ಯೂಮಿನಿಯಂ ಕಂಪನಿಯ ಕೈಗಾರಿಕೆಯಲ್ಲಿ ಬಳಸಲಾಗುತ್ತಿದೆ.

ಹಂಚಿಕೆ :

ಕರ್ನಾಟಕದಲ್ಲಿ ಬಾಕ್ಸೈಟ್‌ ಅದಿರಿನ ನಿಕ್ಷೇಪವು ಬೆಳಗಾವಿ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ. ಬೆಳಗಾವಿ ಜಿಲ್ಲೆಯು ಪ್ರಮುಖ ಬಾಕ್ಸೈಟ್‌ ಉತ್ಪಾದಿಸುವ ಜಿಲ್ಲೆಯಾಗಿದೆ. ಇಲ್ಲಿನ ಬೆಳಗಾವಿ ಮತ್ತು ಖಾನಪುರ ತಾಲ್ಲೂಕುಗಳಲ್ಲಿ ಬಾಕ್ಸೈಟ್‌ ಗಣಿಗಳಿವೆ. ಈ ಅದಿರನ್ನು ಬೆಳಗಾವಿಯ ಇಂಡಿಯನ್‌ ಅಲ್ಯೂಮಿನಿಯಂ ಕಂಪನಿಯ ಕೈಗಾರಿಕೆಯಲ್ಲಿ ಬಳಸಲಾಗುತ್ತಿದೆ.

ಚಿನ್ನ :

  • ಚಿನ್ನವು ಅಪರೂಪವಾಗಿ ಹೊಳೆಯುವ ಮತ್ತು ಹೆಚ್ಚು ಬಾಳಿಕೆ ಬರುವ ಹಳದಿ ಲೋಹವಾಗಿದೆ.
  • ಚಿನ್ನವನ್ನು ಆಭರಣಗಳ ತಯಾರಿಕೆ, ಗಡಿಯಾರ, ಮುಂತಾದ ಅಮೂಲ್ಯ ವಸ್ತುಗಳ ತಯಾರಿಕೆಯಲ್ಲಿ ಅಧಿಕವಾಗಿ ಬಳಸುವರು.
  • ಕರ್ನಾಟಕವು ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ.
  • ಕರ್ನಾಟಕವನ್ನು ಚಿನ್ನದ ನಾಡು ಎಂದು ಕರೆಯಲು ಕಾರಣ ಚಿನ್ನವನ್ನು ಹೆಚ್ಚು ಉತ್ಪಾದಿಸುವುದರಿಂದ.
  • ದೊಡ್ಡ ಪ್ರಮಾಣದ ಚಿನ್ನದ ಗಣಿಗಾರಿಕೆ 1880 ರಲ್ಲಿ ಜಾನೆ ಟೇಲರ್‌ ಎಂಬುವವರು ಪ್ರಾರಂಭ ಮಾಡಿದರು. ಇದು 1885 ರಲ್ಲಿ ಕೆ.ಜಿ.ಎಫ್ ನಲ್ಲಿ ಅಸ್ತಿತ್ವಕ್ಕೆ ಬಂದಿತು.

FAQ :

ಕರ್ನಾಟಕವನ್ನು ಚಿನ್ನದ ನಾಡು ಎಂದು ಕರೆಯಲು ಕಾರಣವೇನು?

ಚಿನ್ನವನ್ನು ಹೆಚ್ಚು ಉತ್ಪಾದಿಸುವುದರಿಂದ

ಭಾರತದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಕರ್ನಾಟಕವು ಎಷ್ಟನೇ ಹೊಂದಿದೆ?

2ನೇ ಸ್ಥಾನ

ಇತರೆ ವಿಷಯಗಳು :

ಬೆಳಕಿನ ಬಗ್ಗೆ ಮಾಹಿತಿ

ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ