ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಮಾಹಿತಿ Information about natural flora of Karnataka Karnatakada Swabhavika Sasyavargagala bagge Mahithi in Kannada
ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಮಾಹಿತಿ
![Information about natural flora of Karnataka in Kannada](https://i0.wp.com/kannadanotes.com/wp-content/uploads/2023/02/ಕರ್ನಾಟಕದ-ಸ್ವಾಭಾವಿಕ-ಸಸ್ಯವರ್ಗಗಳ-ಬಗ್ಗೆ-ಮಾಹಿತಿ.jpg?resize=289%2C192&ssl=1)
ಈ ಲೇಖನಿಯಲ್ಲಿ ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು :
- ಪ್ರಕೃತಿದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮುದಾಯವನ್ನು ಸ್ವಾಭಾವಿಕ ಸಸ್ಯವರ್ಗ ಎನ್ನುವರು.
- ಕರ್ನಾಟಕದ ಕಾಡುಗಳಲ್ಲಿ ವಿಶೇಷವಾಗಿ ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡು ಬರುವುದರಿಂದ ಕರ್ನಾಟಕವನ್ನು ಶ್ರೀಗಂಧದ ನಾಡು ಎನ್ನುವರು.
ನಿತ್ಯಹರಿದ್ವರ್ಣ ಕಾಡುಗಳು :
- ವಾರ್ಷಿಕ 250cm ಗಳಿಗೂ ಅಧಿಕ ಮಳೆ ಬೀಳುವ ಭಾಗಗಳಲ್ಲಿ ಈ ಕಾಡುಗಳು ಬೆಳೆಯುತ್ತವೆ.
- ಅಧಿಕ ಮಳೆ ಮತ್ತು ಅಧಿಕ ಉಷ್ಣಾಂಶಗಳಿಂದ ಇಲ್ಲಿನ ಮರಗಳು ಎತ್ತರವಾಗಿ ಹಾಗೂ ದಟ್ಟವಾಗಿ ಬೆಳೆಯುತ್ತವೆ. ಈ ಕಾಡುಗಳು ದುರ್ಗಮವಾಗಿದ್ದು. ಕೆಲವು ಕಡೆ ಸೂರ್ಯನ ಕಿರಣಗಳು ನೆಲಕ್ಕೆ ತಲುಪುವುದಿಲ್ಲ.
- ಇಲ್ಲಿ ಪ್ರಮುಖವಾಗಿ ಬೆಳೆಯುವ ಮರಗಳು ಬೀಟೆ, ತೇಗ, ಮತ್ತಿ, ನಂದಿ, ಧೂಪ, ಹೊನ್ನೆ, ಹೆಬ್ಬಲಸು ಮುಂತಾದ ಮರಗಳು ಕಂಡು ಬರುತ್ತದೆ.
- ಸಾಂಬಾರ ಪದಾರ್ಥಗಳಾದ ಲವಂಗಾ, ಉಡುಪಿ, ಏಲಕ್ಕಿ, ದಾಲ್ಚಿನ್ನಿ, ಔಷಧಿ ಸಸ್ಯಗಳು ಹೇರಳವಾಗಿ ಬೆಳೆಯುತ್ತವೆ.
- ಈ ಕಾಡುಗಳು ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಂಡು ಬರುತ್ತವೆ.
ಎಲೆ ಉದುರಿಸುವ ಸಸ್ಯವರ್ಗ :
- ಚಳಿಗಾಲದ ತರುವಾಯ ತೇವಾಂಶದ ಕೊರತೆಯಿಂದಾಗಿ ಮರಗಳ ಎಲೆಗಳು ಉದುರುತ್ತವೆ. ಮತ್ತೆ ವಸಂತ ಋತುವಿನಲ್ಲಿ ಚಿಗುರುತ್ತವೆ. ಇವುಗಳನ್ನು ಎಲೆ ಉದುರಿಸುವ ಸಸ್ಯವರ್ಗ ಎನ್ನುವರು.
- ವಾರ್ಷಿಕವಾಗಿ 60-120 cm ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗಗಳು ಕಂಡು ಬರುತ್ತವೆ.
- ತೇಗ, ಹೊನ್ನೆ, ಮತ್ತಿ, ಬೇವು, ಮಾವು, ಹಲಸು, ಮುತ್ತುಗ, ಬಾಗೆ, ಆಲ, ಶ್ರೀಗಂಧ ಮತ್ತು ಬಿದಿರು ಮರಗಳು ಕಂಡುಬರುತ್ತವೆ. ಇವು ದಟ್ಟವಾಗಿ ಬೆಲೆಯುವುದಿಲ್ಲ.
- ಈ ಕಾಡುಗಳು ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಪೂರ್ವಭಾಗ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಡು ಬರುತ್ತವೆ.
ಮಿಶ್ರ ಬಗೆಯ ಕಾಡುಗಳು :
- ನಿತ್ಯಹರಿದ್ವರ್ಣ ಮತ್ತು ಅಗಲ ಎಲೆಗಳನ್ನುಳ್ಳ ಎಲೆ ಉದುರಿಸುವ ಪ್ರಕಾರದ ಮರಗಳು ಬೆಳೆಯುವ ಸಸ್ಯವರ್ಗವೇ ಮಿಶ್ರ ಬಗೆಯ ಕಾಡುಗಳು.
- ವಾರ್ಷಿಕ 120-150 cm ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗ ಕಂಡುಬರುತ್ತದೆ.
- ತೇಗ, ಹೊನ್ನೆ, ಮತ್ತಿ ನಂದಿ, ದಿಂಡಗ, ಶ್ರೀಗಂಧ, ಹಲಸು ಮತ್ತು ಬಿದಿರು ಇಲ್ಲಿ ಬೆಳೆಯುವ ಪ್ರಮುಖ ಮರಗಳು.
- ಈ ಕಾಡುಗಳು ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ ಕೆಲಭಾಗಗಳು. ಕೊಡಗಿನ ಪೂರ್ವ ಬಾಗ, ಹಾಗೂ ಚಿಕ್ಕಮಗಳೂರು ಮತ್ತು ಹಾಸನ, ಮೈಸೂರು ಜಿಲ್ಲೆಯ ಕೆಲಭಾಗಗಳಲ್ಲಿ ಬೆಳೆಯುತ್ತವೆ.
ಹುಲ್ಲುಗಾವಲು ಮತ್ತು ಕುರುಚಲು ಸಸ್ಯವರ್ಗ :
- ಕರ್ನಾಟಕದಲ್ಲಿ 60cm ಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಇಂತಹ ಸಸ್ಯವರ್ಗ ಹಂಚಿಕೆಯಾಗಿದೆ.
- ಇಲ್ಲಿ ಬೆಲೆಯುವ ಕುರುಚಲು ಮತ್ತು ಮುಳ್ಳಿನ ಗಿಡಗಳೆಂದರೆ ಕಳ್ಳಿ, ಕತ್ತಾಳಿ, ಕರಿಜಾಲಿ, ಬೇಲ, ಈಚಲು, ಹಂಚಿ ಮತ್ತು ಕುಂತಿಹುಲ್ಲು, ಅಲ್ಲಲ್ಲಿ ಆಲ, ಬೇವು, ಅರಳಿ, ಮುತ್ತುಗದಂತಹ ಮರಗಳು ಬೆಳೆಯುತ್ತವೆ.
- ಕರಾವಳಿ ಅಂಚಿನಲ್ಲಿರುವ ನದಿ ಮುಖಜ ಭೂಮಿ ಅಳಿವೆಗಳು ಹಾಗೂ ಮರಗಳು ದಂಡೆಗಳ ಭಾಗದಲ್ಲಿ ಬಿಳಿಲುಗಳಿಂದ ಕೂಡಿರುವ ಸಸ್ಯಗಳಿವೆ. ಇವು ಉಪ್ಪು ನೀರಿನಲ್ಲಿ ಬೆಳೆಯುವ ವಿಶಿಷ್ಟವಾದ ಸಾಮರ್ಥವನ್ನು ಹೊಂದಿದೆ. ಇದನ್ನೇ ಮ್ಯಾಂಗ್ರೋವ್ ಕಾಡು ಎನ್ನುವರು.
- ಇವುಗಳ ಹಂಚಿಕೆ ರಾಜ್ಯದಲ್ಲಿ ಅತ್ಯಲ್ಪ
- ಸುಮಾರು 1400 ಮೀ. ಗಿಂತ ಹೆಚ್ಚು ಎತ್ತರವುಳ್ಳ ಭಾಗದಲ್ಲಿ ತಂಪಾದ ವಾಯುಗುಣವಿರುವ ಕುದುರೆಮುಖ. ಬಾಬಾಬುಡನಗಿರಿ, ಬಿಳಿಗಿರಿ ರಂಗನಬೆಟ್ಟ, ಝರಿ, ತೊರೆಗಳಿಂದ ಕೂಡಿದ ಭಾಗಗಳಲ್ಲಿ ಕಂಡುಬರುತ್ತವೆ.
FAQ :
ನಿತ್ಯಹರಿದ್ವರ್ಣ ಕಾಡುಗಳು ಎಲ್ಲಿ ಬೆಳೆಯುತ್ತವೆ?
ವಾರ್ಷಿಕ 250cm ಗಳಿಗೂ ಅಧಿಕ ಮಳೆ ಬೀಳುವ ಭಾಗಗಳಲ್ಲಿ ಈ ಕಾಡುಗಳು ಬೆಳೆಯುತ್ತವೆ.
ಎಲೆ ಉದುರಿಸುವ ಸಸ್ಯವರ್ಗಗಳು ಎಲ್ಲಿ ಬೆಳೆಯುತ್ತವೆ?
ಚಳಿಗಾಲದ ತರುವಾಯ ತೇವಾಂಶದ ಕೊರತೆಯಿಂದಾಗಿ ಮರಗಳ ಎಲೆಗಳು ಉದುರುತ್ತವೆ. ಮತ್ತೆ ವಸಂತ ಋತುವಿನಲ್ಲಿ ಚಿಗುರುತ್ತವೆ. ಇವುಗಳನ್ನು ಎಲೆ ಉದುರಿಸುವ ಸಸ್ಯವರ್ಗ ಎನ್ನುವರು. ವಾರ್ಷಿಕವಾಗಿ 60-120 cm ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗಗಳು ಕಂಡು ಬರುತ್ತವೆ.
ಇತರೆ ವಿಷಯಗಳು :
ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಮಾಹಿತಿ