ಆಂಗ್ಲೋ – ಮರಾಠ ಯುದ್ದಗಳ ಬಗ್ಗೆ ಮಾಹಿತಿ Information about the Anglo-Maratha Wars Anglo – Marata yuddagala bagge Mahithi in Kannada
ಆಂಗ್ಲೋ – ಮರಾಠ ಯುದ್ದಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಆಂಗ್ಲೋ – ಮರಾಠ ಯುದ್ದಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಒಂದನೇ ಆಂಗ್ಲೋ ಮರಾಠ ಯುದ್ದ – 1775-1782 :
- 1772ರಲ್ಲಿ ಮಾಧವರಾಯ್ ನಿಧನ ಹೊಂದಿದಾಗ ಮಗ ನಾರಾಯಣ್ರಾವ್ ಮರಾಠ ಪೇಶ್ವೆಯಾದನು. ನಾರಾಯಣ್ರಾವ್ ನನ್ನು ಕೊಲ್ಲಿಸಿ ಚಿಕ್ಕಪ್ಪ ರಘುನಾಥರಾವ್ ಮರಾಠ ಪೇಶ್ವೆಯಾದರು.
- ಮರಾಠ ಪ್ರಮುಖರು ರಘುನಾಥರಾವರನ್ನು ವಿರೋಧಿಸಿ, ನಾನಾ ಫಡ್ನವೀಸ್ ನೇತೃತ್ವದಲ್ಲಿ ನಾರಾಯಣರಾವನ ಮಗ 2ನೇ ಮಾಧವರಾವನನ್ನು ಬೆಂಬಲಿಸಿದರು.
- 1775 ರಲ್ಲಿ ರಘುನಾಥರಾವ್ ಬ್ರಿಟೀಷರ ಆಶ್ರಯ ಪಡೆದು, ಬಾಂಬೆಯ ಗವರ್ನರ್ ಎಲ್ಫಿನಸ್ಟೋನ್ ನೊಂದಿಗೆ ಸೂರತ್ ಒಪ್ಪಂದ ಮಾಡಿಕೊಂಡನು.
ಸೂರತ್ ಒಪ್ಪಂದದ ಪ್ರಮುಖ ಪ್ರಕಾರಗಳು :
- ಬ್ರಿಟೀಷರ ಸೈನ್ಯವು ರಘುನಾಥರಾವ್ ಪೇಶ್ವೆಯಾಗಲು ಬೆಂಬಲಿಸುವುದು.
- ಸಾಲ್ಸೇಟ್, ಬೆಸ್ಸೀನಗಳನ್ನು ಬ್ರಿಟೀಷರಿಗೆ ಕೊಡುವುದು.
- ಸೈನಿಕ ವೆಚ್ಚವಾಗಿ ರಘುನಾಥರಾವ 1,50,000 ರೂ ನೀಡುವುದು.
- ರಘುನಾಥರಾವ ಮತ್ತು ಬ್ರಿಟೀಷರ ಸಂಯುಕ್ತ ಸೈನ್ಯಕ್ಕೂ, ಮರಾಠರ ಪ್ರಮುಖರಿಗೂ ಪೂನಾದಲ್ಲಿ ಯುದ್ದ ನಡೆಯಿತು. ಆದರೆ ಪೇಶ್ವೆ ಸವಾಯ್ ಮಾಧವರಾಯನ ಪ್ರಧಾನಿ ನಾನಾ ಫಡ್ನವೀಸನು ಕಲ್ಲತ್ತಾದಲ್ಲಿದ್ದ ಬ್ರಿಟೀಷ ಗೌವರ್ನರ್ ಜನರಲ್ ಹೇಸ್ಟಿಂಗ್ಸನ ಸಹಾಯ ಪಡೆಯುವಲ್ಲಿ ಯಶಸ್ವಿಯಾದನು.
ಪುರಂದರ ಒಪ್ಪಂದ -1776- ಮಾರ್ಚ್ 1 :
- 2ನೇ ಮಾಧವರಾವ ಮತ್ತು ವಾರನ್ ಹೇಸ್ಟಿಂಗ್ಸ್ ನೊಂದಿಗೆ ನಡೆಯಿತು.
- ಈ ಒಪ್ಪಂದದ ಪ್ರಕಾರ ಬ್ರಿಟೀಷರು ರಘುನಾಥರಾವನಿಗೆ ನೀಡಿದ ಬೆಂಬಲವನ್ನು ಹಿಂಪಡೆಯಲು ಒಪ್ಪಿದರು.
- ರಘುನಾಥರಾವನಿಗೆ ಮರಾಠ ಪೇಶ್ವೆ ಸರ್ಕಾರವು ಮಾಸಿಕ 25,000 ರೂಗಳ ನಿವೃತ್ತಿ ವೇತನ ನೀಡುವುದು.
- ಬಾಂಬೆ ಸರ್ಕಾರವು ಇದನ್ನು ವಿರೋಧಿಸಿತು. ಎಲ್ಫಿನ್ ಸ್ಟೋನ್ ಯುದ್ದವನ್ನು ಪುನರಾರಂಭಿಸಿದನು.
- 1779 ರಲ್ಲಿ ಸೋತ ಇಂಗ್ಲೀಷರು ವಡಗಾಂವ್ ಒಪ್ಪಂದಕ್ಕೆ ಸಹು ಹಾಕಿದರು.
- 1773 ಕ್ಕಿಂತ ಮುಂಚೆ ಬ್ರಿಟೀಷರು ಗೆದ್ದ ಎಲ್ಲಾ ಮರಾಠ ಪ್ರದೇಶಗಳನ್ನು ಮರಳಿ ಕೊಡುವುದು.
- ಮರಾಠರಿಗೆ ರಘುನಾಥರಾವ ನನ್ನು ಒಪ್ಪಿಸುವುದು.
- ವಾರನ್ ಹೇಸ್ಟಿಂಗ್ ಕಲ್ಲತ್ತಾ ಒಂದು ದೊಡ್ಡ ಸೈನ್ಯವನ್ನು ಗೋಡಾರ್ಡ್ ಮತ್ತು ಪೋಪ್ ಹ್ಯಾಂ ನೇತೃತ್ವದಲ್ಲಿ ಕಳುಹಿಸಿದನು. ಈ ಬೃಹತ್ ಸೈನ್ಯವು 1781 ರಲ್ಲಿ ಮರಾಠರನ್ನು ಸೋಲಿಸಿತು ಮತ್ತು ಸಾಲ್ಬಾಯ್ ಒಪ್ಪಂದ ಮಾಡಿಕೊಂಡಿತು.
ಸಾಲ್ಬಾಯ್ ಒಪ್ಪಂದ – 1782 ಮೇ 17 :
- ಬ್ರಿಟೀಷರು 2ನೇ ಮಾಧವರಾವನನ್ನು ಮರಾಠರ ಪೇಶ್ವೆ ಎಂದು ಒಪ್ಪುವುದು.
- ಪುರಂದರ ಒಪ್ಪಂದದಲ್ಲಿ ಬ್ರಿಟೀಷರು ಮರಾಠರಿಂದ ಪಡೆದ ಪ್ರದೇಶಗಳನ್ನು ವಾಪಸ್ಸು ಕೊಡುವುದು.
- ಸಾಲ್ಸೇಟ್ ಮತ್ತು ಬ್ರೋಚಗಳನ್ನು ಬ್ರಿಟೀಷರು ತಮ್ಮಲ್ಲಿಯೇ ಇಟ್ಟುಕೊಳ್ಳುವುದು.
- ಪೇಶ್ವೆ ಬ್ರಿಟೀಷರಿಗೆ 12 ಲಕ್ಷ ಯುದ್ದ ವೆಚ್ಚ ನೀಡಬೇಕು.
- ರಘುನಾಥರಾವನಿಗೆ ನೀಡಿದ್ದ ಬ್ರಿಟೀಷರ ಬೆಂಬಲ ಹಿಂಪಡೆಯುವುದು ಮತ್ತು ಅವರಿಗೆ ಮಾಸಿಕ ವಿಶ್ರಾಂತಿ ವೇತನ ನೀಡುವುದು.
ಎರಡನೇ ಆಂಗ್ಲೋ-ಮರಾಠ ಯುದ್ದ – 1803-1806 :
- 1800 ರಲ್ಲಿ ನಾನಾ ಫಡ್ನವೀಸನು ಮರಣ ಹೊಂದಿದ ನಂತರ 2ನೇ ಬಾಜಿರಾವನ ಮೇಲೆ ಹಿಡಿತ ಸಾಧಿಸಲು ಮರಾಠ ಸಾಧಿಸಲು ಮರಾಠ ಸರದಾರರು ಆದ ಹೋಳ್ಕರ್ ಮತ್ತು ಸಿಂಧಿಯಾಗಳು ಪ್ರಯತ್ನಿಸುತ್ತಿದ್ದರು.
- ಪೂನಾದಲ್ಲಿ ಪ್ರಭುತ್ವ ಸ್ಥಾಪಿಸಲು ಜಸವಂತರಾಯ್ ಹೋಳ್ಕರ್ ಹಾಗೂ ದೌಲತ್ ರಾವ್ ಸಿಂಧ್ಯಾರ ನಡುವೆ ಪ್ರಬಲ ಹೋರಾಟ ಪ್ರಾರಂಭವಾಯಿತು.
- ಹೋಳ್ಕರ್ ಪೇಶ್ವೆಯು ಸಿಂಧಿಯಾರ ಸೈನ್ಯವನ್ನು ಹದೀಸಪುರದಲ್ಲಿ ಸೋಲಿಸಿ ಪೂನಾ ವಶಪಡಿಸಿಕೊಂಡನು.
- ಪೇಶ್ವೆ 2ನೇ ಬಾಜಿರಾವನು ಬೆಸ್ಸೀನಗೆ ಓಡಿಹೋಗಿ ಬ್ರಿಟೀಷರು ಆಶ್ರಯ ಪಡೆದನು. ಪೇಶ್ವೆಯಾಗಿ ವಿನಾಯಕರಾವವ ಬಂದರು.
ಬೆಸ್ಸೀನ್ ಒಪ್ಪಂದ – 1802 ಡಿಸೆಂಬರ್ 31 :
- 2ನೇ ಬಾಜಿರಾವನು ಸಹಾಯಕ ಸೈನ್ಯ ಪದ್ದತಿಗೆ ಸಹಿ ಹಾಕಿದರು.
- 2ನೇ ಬಾಜಿರಾವ್ ಮತ್ತು ಲಾರ್ಡ್ ವೆಲ್ಲೆಸ್ಲಿ ನಡುವೆ ಒಪ್ಪಂದ ನಡೆಯಿತು.
- ರಕ್ಷಣೆಗಾಗಿ ಪೇಶ್ವೆ 6000 ಬ್ರಿಟೀಷರ ಸೈನಿಕರನ್ನು ಇಟ್ಟುಕೊಳ್ಳಲು ಒಪ್ಪಿದನು ಹಾಗೂ ಸೈನ್ಯದ ನಿರ್ವಹಣೆಗಾಗಿ ಪ್ರತೀ ವರ್ಷ 26 ಲಕ್ಷ ರೂಪಾಯಿಗಳನ್ನು ನೀಡಲು ಒಪ್ಪಿದನು.
- ಬೆಸ್ಸೀನ ಒಪ್ಪಂದವು ಬ್ರಿಟೀಷರಿಗೆ ಮರಾಠರ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲಿ ಅನುಕೂಲಕರ ಅವಕಾಶವನ್ನು ಒದಗಿಸಿಕೊಟ್ಟಿತು.
- ಪೇಶ್ವೆಯು ತನ್ನ ಸಾಮ್ರಾಜ್ಯದ ಉತ್ತರದ ಭಾಗವನ್ನು ಬ್ರಿಟೀಷರಿಗೆ ಒಪ್ಪಿಸಿದನು.
ದೇವಗಾಂವ್ ಒಪ್ಪಂದ – 1803 ಡಿಸೆಂಬರ್ 17 :
ಬೊನ್ಸ್ಲೆ ಕಟಕ್, ಬಾಲಸೂರಗಳನ್ನು ಇಂಗ್ಲೀಷರಿಗೆ ಕೊಟ್ಟು, ಸಹಾಯಕ ಸೈನ್ಯ ಪದ್ದತಿಗೆ ಸಹಿ ಹಾಕಿದನು.
ಮೂರನೇ ಆಂಗ್ಲೋ ಮರಾಠ ಯುದ್ದ – 1817-1818 :
- ಕಳೆದು ಹೋಗಿದ್ದ ಮರಾಠರ ವೈಭವವನ್ನು ಪುನರ್ ಸ್ಥಾಪಿಸಲು ಮತ್ತು ತನ್ನ ಅಧಿಕಾರ, ಪ್ರತಿಷ್ಠೆಗಳನ್ನು ಪೇಶ್ವೆ 2ನೇ ಬಾಜಿರಾವ್ ಬ್ರಿಟೀಷರ ವಿರುದ್ದ ಬೊನ್ಸ್ಲೆ, ಹೋಳ್ಕರ್ ಮತ್ತು ಸಿಂಧಿಯಾರನ್ನು ಒಂದಿಗೂಡಿಸಿದನು.
- ಈ ಉದ್ದೇಶಕ್ಕಾಗಿ ಪಠಾಣರು ಮತ್ತು ಪಿಂಡಾರಿಗಳ ಬೆಂಬಲವನ್ನು ಪಡೆದರು ಮತ್ತು ಕಿರ್ಕಿಯ ಬ್ರಿಟೀಷರ ಸೇನಾ ಶಿಬಿರಕ್ಕೆ ದಾಳಿ ಮಾಡಿದರು. ಇದು 3ನೇ ಆಂಗ್ಲೋ ಮರಾಠರ ಯುದ್ದಕ್ಕೆ ತತಕ್ಷಣದ ಕಾರಣವಾಗಿದೆ. ಕಿರ್ಕಿ ಕದನದಲ್ಲಿ ಬ್ರಿಟೀಷರ ಸೈನ್ಯ ಪೇಶ್ವೆಯನ್ನು ಸೋಲಿಸಿ ಪೂನಾವನ್ನು ವಶಪಡಿಸಿಕೊಂಡಿತು.
- 1817 ರಲ್ಲಿ ಬ್ರಿಟೀಷರು ಹೋಳ್ಕರನನ್ನು ಮಹಿದಪುರ ಎಂಬಲ್ಲಿ ಸೋಲಿಸಿದನು.
- ಎಲ್ಲಾ ಮರಾಠ ಸರದಾರರು ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿಕೊಂಡರು.
- ಅಸಿರಘರ್ ಕೋಟೆ ಬ್ರಿಟೀಷರ ವಶವಾಗುವುದರೊಂದಿಗೆ 3ನೇ ಆಂಗ್ಲೋ-ಮರಾಠ ಯುದ್ದವು ಕೊನೆಗೊಂಡಿತು.
ಯುದ್ದದ ಪರಿಣಾಮಗಳು :
- ಮರಾಠರು ಸೋತು ಸಂಪೂರ್ಣವಾಗಿ ಪತನವಾದರು.
- ಪೇಶ್ವೆ ಬಾಜಿರಾವನಿಗೆ ವಾರ್ಷಿಕ 8,00,000 ರೂಪಾಯಿಗಳ ವಿಶ್ರಾಂತಿ ವೇತನ ನೀಡಿ ಬೆಥೂರಿಗೆ ಕಳುಹಿಸಲಾಯಿತು.
- ಛತ್ರಪತಿ ವಂಶಸ್ಥ ಪ್ರತಾಪಸಿಂಗ್ ನಿಗೆ ಸತಾರ ಪ್ರಾಂತ್ಯವನ್ನು ನೀಡಿ ಉಳಿದ ಪ್ರದೇಶಗಳನ್ನು ಬಾಂಬೆ ಫ್ರೆಸಿಡೆನ್ಸಿಯಲ್ಲಿ ವಿಲೀನಗೊಳಿಸಿದರು.
FAQ :
ಒಂದನೇ ಆಂಗ್ಲೋ ಮರಾಠ ಯುದ್ದ ಯಾವಾಗ ನಡೆಯಿತು?
1775-1782 ರಲ್ಲಿ ನಡೆಯಿತು.
ಮೂರನೇ ಆಂಗ್ಲೋ ಮರಾಠ ಯುದ್ದದ ಪರಿಣಾಮ ತಿಳಿಸಿ?
ಮರಾಠರು ಸೋತು ಸಂಪೂರ್ಣವಾಗಿ ಪತನವಾದರು.
ಪೇಶ್ವೆ ಬಾಜಿರಾವನಿಗೆ ವಾರ್ಷಿಕ 8,00,000 ರೂಪಾಯಿಗಳ ವಿಶ್ರಾಂತಿ ವೇತನ ನೀಡಿ ಬೆಥೂರಿಗೆ ಕಳುಹಿಸಲಾಯಿತು.
ಇತರೆ ವಿಷಯಗಳು :
ಭಾರತದ ರೈಲ್ವೆ ಸಾರಿಗೆ ಬಗ್ಗೆ ಮಾಹಿತಿ
ಸರ್.ಸಿ.ವಿ.ರಾಮನ್ ರವರ ಬಗ್ಗೆ ಮಾಹಿತಿ