ಬುಡಕಟ್ಟು ದಂಗೆಗಳ ಬಗ್ಗೆ ಮಾಹಿತಿ Information about tribal uprisings Budakattu Janangagala bagge Mahithi in Kannada
ಬುಡಕಟ್ಟು ದಂಗೆಗಳ ಬಗ್ಗೆ ಮಾಹಿತಿ
![Information about tribal uprisings in Kannada](https://i0.wp.com/kannadanotes.com/wp-content/uploads/2023/03/ಬುಡಕಟ್ಟು-ದಂಗೆಗಳ-ಬಗ್ಗೆ-ಮಾಹಿತಿ.jpg?resize=319%2C211&ssl=1)
ಈ ಲೇಖನಿಯಲ್ಲಿ ಬುಡಕಟ್ಟು ದಂಗೆಗಳ ಬಗ್ಗೆ ಸಂಪೂರ್ಣಾವದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕೋಲಾರ ದಂಗೆ 1831 :
- ಕೋಲರು ಛೋಟಾ ನಾಗ್ಪುರ ಪ್ರಸ್ಥಭೂಮಿಯ ಬುಡಕಟ್ಟು ಜನಾಂಗ
- ಜಮೀನ್ದಾರರ ಶೋಷಣೆಯ ವಿರುದ್ದ ಕೋಲರು “ಸಂಕಾ” ಎಂಬ ಗ್ರಾಮದಲ್ಲಿ ಸಭೆ ಸೇರಿದರು.
- ಕೋಲಾರ ದಂಗೆಯ ನಾಯಕತ್ವ ವಹಿಸಿದವರು – ಬುದ್ದೋ ಭಗತ್
- ದಂಗೆ ನಡೆದ ಸ್ಥಳಗಳು – ಸಿಂಗಭೂಮ್, ರಾಂಚಿ, ಫಲಮಾವು, ಹಜಾರಿಭಾಗ್
- ಬ್ರಿಟೀಷರು ಸೈನವನ್ನು ಬಳಸಿ ದಂಗೆಯನ್ನು ಶಮನ ಮಾಡಿದರು.
ಸಂತಾಲರ ದಂಗೆ 1855-1856 :
- ಸಂತಾಲರು ಮೂಲತಃ ಬಂಗಾಳದವರು
- ಬಂಗಾಳದ ಖಾಯಂ ಜಮೀನ್ದಾರಿ ಪದ್ದತಿಯಿಂದ ಬೇಸತ್ತು ಸಂತಾಲರು ಬಂಗಾಳ, ಬಿಹಾರದ ರಾಜಮಹಲ್ ಬೆಟ್ಟ, ಒರಿಸ್ಸಾಗಳ ಮಿಡ್ನಾಪುರ, ಹಜಾರಿಬಾಗಗಳಲ್ಲಿ ಬಂದು ನೆಲೆಸಿದ್ದರು.
- ಕೃಷಿಕ ಸಂತಾಲರು ಜಮೀನ್ದಾರರ ಶೋಷಣೆಯ ವಿರುದ್ದ ದಂಗೆಯೆದ್ದರು.
- ಸಂತಾಲರು ದಂಗೆಯ ನಾಯಕತ್ವ ವಹಿಸಿದವರು – ಸಿದು ಮಂಜಿ ಮತ್ತು ಕನ್ಹು ಮಂಜಿ
- ಸಿದು ಮಂಜಿ ಮತ್ತು ಕನ್ಹು ಮಂಜಿ ಈ ದಂಗೆಯ ಸಂದರ್ಭದಲ್ಲಿ ಬ್ರಿಟೀಷ್ ಅಧಿಕಾರಿ ಬರೋನ್ ನನ್ನು ಕೊಲೆ ಮಾಡಿದರು.
- 1856ರಲ್ಲಿ ಬ್ರಿಟೀಷರು ಈ ದಂಗೆಯನ್ನು ಹತ್ತಿಕ್ಕಿದ್ದರು.
ಮುಂಡರ ದಂಗೆ 1899-1900 :
- ದಕ್ಷಿಣ ಬಿಹಾರದ ಛೋಟಾ ನಾಗ್ಪುರದಲ್ಲಿದ್ದ ಒಂದು ಬುಡಕಟ್ಟು ಜನಾಂಗ
- ಬ್ರಿಟೀಷರು ತಂದ ಭೂ ಕಾಯ್ದೆ ಮತ್ತು ಕ್ರೈಸ್ತ ಮಿಷನರಿಗಳ ಚಟುವಟಿಕೆಯಿಂದಾಗಿ ದಂಗೆ ನಡೆಯಿತು.
- ಮುಂಡರ ದಂಗೆ ನಾಯಕ – ಭಗವಾನ್ ಬಿರ್ಸಾ ಅಗೈ
- ಬ್ರಿಟೀಷರು ಬಿರ್ಸಾನನ್ನು ಸೋಲಿಸಿ ಬಂಧಿಸುವ ಮೂಲಕ ಈ ದಂಗೆಯನ್ನು ಅಡಗಿಸಲಾಯಿತು.
ಕಚ್ಚಾ ನಾಗ ಹೋರಾಟ 1931-1935 :
- ಇವರನ್ನು “ಜೆಲಿಯನ್ ಗ್ರೋಂಗ್” ಜನಾಂಗ ಎಂತಲೂ ಕರೆಯುವರು.
- ನಾಗರನ್ನು ಸಂಘಟಿಸಿದರು – ಜುಡೋ ನಾಗ್
- ನಾಗಾ ಜನಾಂಗ ನೆಲೆಸಿದ್ದ ಸ್ಥಳಗಳು – ಮಣಿಪುರ
- ಜುಡೋ ನಾಗ್ ಹೊಸ ರಾಜ್ಯವನ್ನು ಕಟ್ಟಿ ಜನರಲ್ಲಿದ್ದ ಮೂಡನಂಬಿಕೆ, ದುಷ್ಟಾಚಾರಗಳನ್ನು ತೆಗೆದುಹಾಕಿ ಜನಜಾಗೃತಿ ಮೂಡಿಸುತ್ತಿದ್ದ ಜುಡೋನಾಗನನ್ನು ಬ್ರಿಟೀಷರು 1931 ರಲ್ಲಿ ಗಲ್ಲಿಗೇರಿಸಿದರು.
- ಜುಡೋನಾಗ್ ಮರಣದ ನಂತರ ಕಚ್ಚಾ ನಾಗಾ ಹೋರಾಟದ ನಾಯಕತ್ವ ವಹಿಸಿದವರು – ರಾಣಿ ಗೈಡನೀಲಿ
- 1935ರಲ್ಲಿ ಬ್ರಿಟೀಷರು ರಾಣಿ ಗೈಡನೀಲಿಯನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಿದರು.
- ಭಾರತದ ಸ್ವಾತಂತ್ರ್ಯ ನಂತರ 1948ರಲ್ಲಿ ಜವಹಾರ್ ಲಾಲ್ ನೆಹರೂರವರು ರಾಣಿ ಗೈಡ ನಿಲಿಯನ್ನು ಬಿಡುಗಡೆ ಮಾಡಿ ನಾಗರ ರಾಣಿ ಎಂಬ ಬಿರುದನ್ನು ನೀಡಿದರು.
ಅಲ್ಲೂರಿ ಸೀತಾರಾಮರಾಜು ದಂಗೆ 1922 :
- ಮಹಾತ್ಮ ಗಾಂಧೀಜಿಯವರ ತತ್ವಕ್ಕೆ ಅನುಗುಣವಾಗಿ ಆಂಧ್ರಪ್ರದೇಶ ಉತ್ತರ ಗೋದಾವರಿಯಲ್ಲಿ ನಡೆದ ದಂಗೆ
- 1803ರಲ್ಲಿ ಕೋಯ ಮತ್ತು 1846ರಲ್ಲಿ ಕೊಂಡರ ದಂಗೆ ನಡೆದಿದ್ದವು.
- ರಂಪಾ ದಂಗೆಯ ನಾಯಕತ್ವ ವಹಿಸಿದ್ದವರು – ಅಲ್ಲೂರಿ ಸೀತರಾಮರಾಜು
- ಅಲ್ಲೂರಿ ಸೀತಾರಾಮರಾಜು “ಮಹಾತ್ಮ ಗಾಂಧಿ ಕೀ ಜೈ” ಎಂಬ ಘೋಷಣೆಯನ್ನು ಮೊಟ್ಟ ಮೊದಲಿಗೆ ಪ್ರಚಾರ ಮಾಡಿದರು.
- ಬ್ರಿಟೀಷರು ಈ ದಂಗೆಯನ್ನು ಅಡಗಿಸುವಾಗ “ಅಲ್ಲೂರಿ ಸೀತಾರಾಮ ರಾಜು” ರವರನ್ನು ಎನಕೌಂಟರ್ ಮಾಡಿದರು.
ಪ್ರಮುಖ ದಂಗೆಗಳು :
ದಂಗೆ | ಸ್ಥಳ | ನಾಯಕರು |
ಕೊಕಾದಂಗೆ(1872) | ಪಂಜಾಬ್ | ರಾಮಸಿಂಗ್ ಕೊಕ್ಕನಯಕ |
ಜಯಂತಿಯಾ ದಂಗೆ(1862) | ಮೇಘಾಲಯ | ಯು ಕ್ಯಾಂಗ್ ನೋಗ್ ಬಾ |
ರಾಮೋಸಿ ದಂಗೆ(1822-1829) | ಮಹಾರಾಷ್ಟ್ರ | ಚಿತ್ತೋರ್ ಸಿಂಗ್ |
ಬಿಲ್ಲರ ದಂಗೆ(1825) | ಪಶ್ಚಿಮ ಘಟ್ಟ | ಸೇವಾರಾಂ ನಾಯಕ್ |
ಬಿಲ್ಲರ ದಂಗೆ(1844) | ರಾಜಸ್ತಾನ | ಗೋವಿಂದ ಗುರು |
ಗಡ್ಕರಿ ದಂಗೆ(1844) | ಮಹಾರಾಷ್ಟ್ರ | |
ಅಹೋಂ ದಂಗೆ(1828) | ಅಸ್ಸಾಂ | ಕೊನ್ವಾರ್ |
FAQ :
ಕೋಲಾರ ದಂಗೆ ಯಾವಾಗ ನಡೆಯಿತು?
1831.
ರಂಪಾ ದಂಗೆಯ ನಾಯಕತ್ವ ವಹಿಸಿದ್ದವರು ಯಾರು?
ಅಲ್ಲೂರಿ ಸೀತರಾಮರಾಜು.
ಇತರೆ ವಿಷಯಗಳು :
ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಮಾಹಿತಿ